ರಾಷ್ಟ್ರೀಯ

ರಾಯಪುರದ ಹೋಟೆಲ್ ನಲ್ಲಿ ಅರೆನಗ್ನವಾಗಿ ಯುವತಿಯ ಶವ ಪತ್ತೆ

Pinterest LinkedIn Tumblr


ರಾಯ್‍ಪುರ: ಸ್ನೇಹಿತನೊಂದಿಗೆ ಛತ್ತೀಸ್‍ಗಢದ ರಾಯಪುರದ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದ ಯುವತಿಯೊಬ್ಬಳ ಮೃತದೇಹ ಮೂರು ದಿನಗಳ ಬಳಿಕ ಕೊಠಡಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅಂಬಿಕಾಪುರದ ನಿವಾಸಿಯಾಗಿರುವ ಅಪೂರ್ವ ತಿವಾರಿ ಮೃತ ಯುವತಿಯಾಗಿದ್ದು, ತನ್ನ ಸ್ನೇಹಿತ ವಿಪಿನ್ ದೂವೆ ಎಂಬಾತನೊಂದಿಗೆ ಮೇ 11 ರಂದು ರಾತ್ರಿ ರಾಯಪುರದ ರೈಲ್ವೇ ನಿಲ್ದಾಣದ ಹೋಟೆಲ್ ನಲ್ಲಿ ಕೊಠಡಿ ಪಡೆದಿದ್ದಳು. ಈ ವೇಳೆ ನಾವಿಬ್ಬರು ಖಾಸಗಿ ಸಂಸ್ಥೆಯೊಂದರಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದಾಗಿ ತಿಳಿಸಿದ್ದರು. ಆದರೆ ಬಳಿಕ ಮರುದಿನದಿಂದ ಆ ಕೊಠಡಿ ಲಾಕ್ ಆಗಿತ್ತು.

ಸತತ ಮೂರು ದಿನಗಳ ಬಳಿಕ ಕೊಠಡಿ ಬಾಗಿಲು ತೆರೆಯದ ಕಾರಣ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಕೊಠಡಿಯ ಬಾಗಿಲನ್ನು ತೆರೆದಿದ್ದಾರೆ. ಈ ವೇಳೆ ಯುವತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಸಿಬ್ಬಂದಿ ಘಟನೆ ಬಗ್ಗೆ ತಿಳಿಸಿದ್ದಾರೆ.

ಹೋಟೆಲ್ ಸಿಬ್ಬಂದಿ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕೊಠಡಿಯಲ್ಲಿ ದೊರೆತ ಕೆಲ ದಾಖಲೆಗಳ ಆಧಾರದ ಮೇಲೆ ಇಬ್ಬರ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸದ್ಯ ಯುವತಿಯೊಂದಿಗೆ ಆಗಮಿಸಿದ್ದ ಸ್ನೇಹಿತ ವಿಪಿನ್ ದೂಬೆ ನಾಪತ್ತೆಯಾಗಿದ್ದು, ಆತನೇ ಕೊಲೆ ಮಾಡಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Comments are closed.