ಕರ್ನಾಟಕ

ಬಿಜೆಪಿಯತ್ತ ಮುಖ ಮಾಡಿದ ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪಗೌಡ ಪಾಟೀಲ !

Pinterest LinkedIn Tumblr

ರಾಯಚೂರು: ಜಿಲ್ಲೆಯ ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪಗೌಡ ಪಾಟೀಲ ಅವರು ಬಿಜೆಪಿಗೆ ಬೆಂಬಲ ನೀಡುವ ಕಡೆಗೆ ಮುಖಮಾಡಿದ್ದಾರೆ ಎನ್ನುವ ಮಾತು ಜೋರಾಗಿದೆ.

ಬೆಳಿಗ್ಗೆಯಿಂದಲೆ ಮೊಬೈಲ್ ಸಂಪರ್ಕಕ್ಕೆ ಸಿಗದೆ ದೂರ ಉಳಿದಿದ್ದಾರೆ. ಅವರ ಆಪ್ತರು ಹೇಳುವ ಪ್ರಕಾರ, ‘ಶಾಸಕ ಪ್ರತಾಪಗೌಡ ಮೊಬೈಲ್ ಸಂಪರ್ಕಕ್ಕೆ ಸಿಗದಿರುವುದು ನಿಜ. ಸಂಜೆ 6ಕ್ಕೆ ಅವರ ನಿಲುವು ಜನರಿಗೆ ಗೊತ್ತಾಗಲಿದೆ’

2008ರಲ್ಲಿ ಪ್ರಥಮ ಬಾರಿ ಬಿಜೆಪಿ ಶಾಸಕರಾಗಿದ್ದ ಅವರು, ಯಡಿಯೂರಪ್ಪ ಅವರೊಂದಿಗೆ ಕೆಜೆಪಿ ಸೇರಿದ್ದರು. 2013ರಲ್ಲಿ ಯಡಿಯೂರಪ್ಪ ಜೊತೆಯಲ್ಲಿ ಮರಳಿ ಬಿಜೆಪಿ ಪಾಳೇಯ ಸೇರಿಕೊಳ್ಳದೆ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು. 2013ರಲ್ಲಿ 2018ರಲ್ಲಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಶಾಸಕರಾಗಿ ಹ್ಯಾಟ್ರಿಕ್ ಸಾಧನೆ‌ ಮಾಡಿರುವ ಅವರನ್ನು ರಾಜಕೀಯಕ್ಕೆ ಮೊದಲು ಕರೆ ತಂದಿದ್ದು ವಿಧಾನ ಪರಿಷತ್ ಸದಸ್ಯರಾಗಿದ್ದ ಮನೋಹರ ಮಸ್ಕಿ ಹಾಗೂ ಶಾಸಕ ಶ್ರೀರಾಮುಲು ಅವರು.

ಇದೀಗ ಪ್ರತಾಪಗೌಡ ಅವರಿಗೆ ಗಾಳ ಹಾಕಿರುವ ಶ್ರೀರಾಮುಲು ಮತ್ತು ಮನೋಹರ ಮಸ್ಕಿ ಅವರು ಬಿಜೆಪಿಯತ್ತ ಸೆಳೆದಿದ್ದಾರೆ ಎನ್ನಲಾಗುತ್ತಿದೆ.

Comments are closed.