ಬಿಡದಿ: ಆನಂದ್ಸಿಂಗ್ ರಾಜೀನಾಮೆ ನೀಡಿಲ್ಲ. ಅವರಿಗೆ ಒತ್ತಡ ಹೆಚ್ಚಿದೆ. ಹಾಗಾಗಿ ನಾವು ಸುಮ್ಮನಿದ್ದೇವೆ. ನಾನು ಆನಂದ್ ಸಿಂಗ್ ಹಾಗೂ ಪ್ರತಾಪ್ ಸಿಂಗ್ರನ್ನು 24 ಗಂಟೆಯೊಳಗೆ ಕರೆದುಕೊಂಡು ಬರುತ್ತೇನೆ ಎಂದು ರಾಮನಗರದ ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನಾರ್ದನ ರೆಡ್ಡಿ ಪಾಪ ಎಲ್ಲರಿಗೂ ಫೋನ್ ಮಾಡ್ತಿದ್ದಾರೆ. ಆದರೆ, ಬಿಜೆಪಿ ಅವರನ್ನು ನಮ್ಮ ಪಕ್ಷದವರೇ ಅಲ್ಲ ಎನ್ನುತ್ತಾರೆ ಎಂದರು.
ಗೂಂಡಾಗಿರಿಯಿಂದ ಏನೂ ಮಾಡುವುದಕ್ಕಾಗುವುದಿಲ್ಲ ಎಂಬ ಬಿಎಸ್ವೈ ಹೇಳಿಕೆಗೆ ಈಗಲ್ಟನ್ ರೆಸಾರ್ಟ್ನಲ್ಲಿ ಹೀಗೆ ಪ್ರತಿಕ್ರಿಯಿಸಿ, ಈ ಸರಕಾರಕ್ಕೆ ಬಲ ಇಲ್ಲ. ಜನ ಅವರಿಗೆ ನೀಡಿರುವುದು 104 ಸ್ಥಾನಗಳು ಮಾತ್ರ ಸಿಕ್ಕಿದೆ ಎಂದರು.
ಅಧಿಕಾರಕ್ಕೆ ಬಂದೊಡನೆಯೇ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಿ ಗೂಂಡಾಗಿರಿ ಮಾಡುತ್ತಿರುವುದು ಬಿ.ಎಸ್.ಯಡಿಯೂರಪ್ಪ. ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು ಒಳ್ಳೆಯದಲ್ಲ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
Comments are closed.