ರಾಷ್ಟ್ರೀಯ

ಭಕ್ತನೊಬ್ಬನಿಂದ ತಿರುಪತಿ ತಿಮ್ಮಪ್ಪನಿಗೆ 1 ಕೋಟಿ ಕಾಣಿಕೆ

Pinterest LinkedIn Tumblr


ಹೈದರಾಬಾದ್: ತಿರುಪತಿ ತಿಮ್ಮಪ್ಪನ ಭಕ್ತನೊಬ್ಬ ದೇವಾಲಯಕ್ಕೆ 1 ಕೋಟಿ ರೂ. ಕಾಣಿಕೆ ನೀಡಿದ್ದಾನೆ. ಟಿಟಿಡಿಯ ಎಸ್‌.ವಿ. ವಿದ್ಯಾದಾನ ಟ್ರಸ್ಟ್‌ಗೆ ಹೈದರಾಬಾದ್‌ ಮೂಲದ ಉದ್ಯಮಿ ಬಿ.ಕರುಣಾಕರ ರೆಡ್ಡಿ 1 ಕೋಟಿ 116 ರೂಪಾಯಿಯನ್ನು ವೆಂಕಟೇಶ್ವರನಿಗೆ ಕಾಣಿಕೆಯಾಗಿ ನೀಡಿದ್ದಾರೆ. ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ಉದ್ಯಮಿ ಹಾಗೂ ಅವರ ಕುಟುಂಬಸ್ಥರು ತಿರುಮಲದ ರಂಗನಾಯಕುಲ ಮಂಟಪದಲ್ಲಿರುವ ಟಿಟಿಡಿ ಜಂಟಿ ಎಕ್ಸಿಕ್ಯೂಟಿವ್ ಅಧಿಕಾರಿ ಕೆ.ಎಸ್‌.ಶ್ರೀನಿವಾಸ ರಾಜುಗೆ ಚೆಕ್ ಮುಖಾಂತರ ಕಾಣಿಕೆಯಾಗಿ ನೀಡಿದ್ದಾರೆ.

ಕಳೆದ ವಾರವಷ್ಟೇ ಖ್ಯಾತ ಉದ್ಯಮಿ ಹಾಗೂ ಆರ್‌.ಎಸ್‌.ಬ್ರದರ್ಸ್ ಶೋರೂಂ ಮುಕ್ಯಸ್ಥ ವೆಂಕಟೇಶ್ವರಲು ತಿರುಪತಿ ವೆಂಕಟೇಶ್ವರನಿಗೆ 1 ಕೋಟಿ 60 ಲಕ್ಷ ರೂ. ಕಾಣಿಕೆ ನೀಡಿದ್ದರು. ಅಲ್ಲದೆ, ಈ ಹಣವನ್ನು ಶ್ರೀ ಬಾಲಾಜಿ ಆರೋಗ್ಯವರಪ್ರಸಾದಿನಿ ಸ್ಕೀಂನ ಬಳಕೆಗೆ ನೀಡಬೇಕೆಂದು ಮನವಿ ಮಾಡಿದ್ದರು. ಅಲ್ಲದೆ, ಇವರು ಸಹ ಟಿಟಿಡಿ ಜಂಟಿ ಎಕ್ಸಿಕ್ಯೂಟಿವ್ ಅಧಿಕಾರಿ ಕೆ.ಎಸ್‌.ಶ್ರೀನಿವಾಸ ರಾಜುಗೆ ಡಿಡಿ ಮುಖಾಂತರ ಹಣ ನೀಡಿದ್ದರು.

‘ಕ್ಯೂ’ ವ್ಯವಸ್ಥೆಯಲ್ಲಿ ಬದಲಾವಣೆ
ಇನ್ನು, ತಿರುಪತಿಯಲ್ಲಿ ದರ್ಶನ ಪಡೆಯಲು ಭಕ್ತರಿಗೆ ಅನುಕೂಲವಾಗುವಂತೆ ತಿರುಮಲದ ಸರತಿ ಸಾಲು ವ್ಯವಸ್ಥೆಯನ್ನು ಪರಿಷ್ಕರಣೆ ಮಾಡಿದೆ. ಈ ಹಿಂದಿನ ನಿಲ್ಲಿಸುವ ನಡೆಸುವ ಹಾಗೂ ಅನುಮತಿಸದಿರುವ ವ್ಯವಸ್ಥೆಯಿಂದ ಸಂಪಂಗಿ ಪ್ರಕಾರಂ ಪೋರ್ಟಲ್‌ಗಳಲ್ಲಿ ಹಾಗೂ ಸರತಿ ಸಾಲುಗಳಲ್ಲಿ ತೀವ್ರ ತೊಂದರೆಯಾಗುತ್ತಿತ್ತು. ಇನ್ನು, ಮಹಾದ್ವಾರದಿಂದ ಈಗ ಕೇವಲ 2 ಸರತಿ ಸಾಲುಗಳಿದ್ದು, ಮೊದಲನೇ ಸಾಲು ರಂಗನಾಯಕುಲಾ ಮಂಟಪದ ಮೂಲಕ ಹಾದು ಹೋದ್ರೆ, ಮತ್ತೊಂದು ಸಾಲು ಧ್ವಜಸ್ತಂಭದ ಮೂಲಕ ಹಾದುಹೋಗುತ್ತದೆ. ಬಳಿಕ ಎರಡೂ ಸಾಲುಗಳು ವೆಂಡಿ ವಕೀಲಿಯಲ್ಲಿ ಒಂದೇ ಸಾಲಾಗಲಿದೆ ಎಂದು ತಿಳಿದುಬಂದಿದೆ.

Comments are closed.