ಮಂಗಳೂರು : ಕಾಶೀಮಠಾಧೀಶರಾದ ಶ್ರೀಮದ್ ಸಂಯ್ಯಮೀಂದ್ರ ತೀರ್ಥ ಶ್ರೀ ಪಾದಂಗಳವರು ಆದಿತ್ಯವಾರ ಸಾಯಂಕಾಲ ಪದವಿನಂಗಡಿ ಶ್ರೀ ಪ್ರಸನ್ನ ಗಣಪತಿ ಮಂದಿರಕ್ಕೆ ಭೇಟಿಯಿತ್ತು ಶ್ರೀದೇವರ ದರ್ಶನ ಪಡೆದು ಬಳಿಕ ನೂತನವಾಗಿ ನಿರ್ಮಿಸಲಾದ ಸ್ವರ್ಣ ಖಚಿತ ಚಕ್ರಾಣಿಕೆಯ ಮಾಲೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು.
ತದನಂತರ ಶ್ರೀಗಳವರಿಗೆ ಪಾದಪೂಜೆ ನೆರವೇರಿತು . ಸದ್ಭಕ್ತ ಸಮಾಜ ಭಾಂದವರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಹರಿಗುರುಗಳ ಕೃಪೆಗೆ ಪಾತ್ರರಾದರು.
ಶ್ರೀದೇವಳದ ಹರಿಕಂಡಿಗೆ ರುಕ್ಮಯ್ಯ ಭಟ್, ಶ್ರೀಧರ್ ಭಟ್, ಶ್ರೀಕಾಂತ್ ಭಟ್ , ಕಮಲಾಕ್ಷ ಭಟ್ , ಕೊಂಚಾಡಿ ವೆಂಕಟರಮಣ ದೇವಳದ ಶ್ರೀ ರತ್ನಾಕರ್ ಕಾಮತ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ : ಮಂಜು ನೀರೇಶ್ವಾಲ್ಯ
Comments are closed.