ಕರ್ನಾಟಕ

ಪೊಲೀಸ್ ಬಂಧನದಿಂದ ಪರಾರಿಯಾದ ಮಾಸ್ತಿಗುಡಿ ನಿರ್ಮಾಪಕ

Pinterest LinkedIn Tumblr


ಬೆಂಗಳೂರು: ಮಾಸ್ತಿಗುಡಿ ಸಿನಿಮಾ ಚಿತ್ರೀಕರಣ ವೇಳೆ ಖಳನಟರಿಬ್ಬರೂ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರ್ಮಾಪಕ ಸುಂದರ್​ ಗೌಡ ವಿರುದ್ಧ ಜಾಮೀನು ರಹಿತ ವಾರೆಂಟ್​ ಜಾರಿಯಾಗಿದ್ದು ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಅವರು ಪರಾರಿಯಾಗಿದ್ದಾರೆ.

ರಾಮನಗರ ಜೆಎಂಎಫ್​ಸಿ ನ್ಯಾಯಾಲಯ ಸುಂದರ್​ ಗೌಡ ವಿರುದ್ಧ ವಾರಂಟ್​ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ತಾವರೆಕೆರೆ ಪೊಲೀಸರು ಚನ್ನಮ್ಮಕೆರೆ ಅಚ್ಚುಕಟ್ಟು ನಗರದಲ್ಲಿರುವ ಅವರ ನಿವಾಸಕ್ಕೆ ನಿನ್ನೆ ಸಂಜೆ ತೆರಳಿದ್ದಾಗ ಸುಂದರ್​ ಪರಾರಿಯಾಗಿದ್ದಾರೆ. ಪೊಲೀಸರು ಹೋದ ತಕ್ಷಣ ಬಟ್ಟೆ ಹಾಕಿಕೊಂಡು ಬರುತ್ತೇನೆ ಎಂದು ಹೇಳಿ ಹೋಗಿ ಅಲ್ಲಿಂದ ಓಡಿಹೋಗಿದ್ದಾರೆ.

ಈ ವೇಳೆ ನಟ ದುನಿಯಾ ವಿಜಯ್​ ಹಾಜರಿದ್ದು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರು. ಸುಂದರ್​ ತಾಯಿಗೆ ಹುಷಾರಿಲ್ಲ. ಬೆಳಗ್ಗೆ ನಾನೇ ಕರೆದುಕೊಂಡು ಬರುತ್ತೇನೆ ಎಂದು ಹೇಳಿದರೂ ಪೊಲೀಸರು ಒಪ್ಪಲಿಲ್ಲ. ಪರಾರಿಯಾದ ಸುಂದರ್​ಗಾಗಿ ಶೋಧಕಾರ್ಯ ನಡೆಯುತ್ತಿದೆ.

Comments are closed.