ರಾಷ್ಟ್ರೀಯ

ಅಲ್ಲಾನನ್ನು ಸಂತೃಪ್ತಿಪಡಿಸಲು ತಂದೆಯೋರ್ವನಿಂದ ಪುತ್ರಿಯ ಬಲಿ

Pinterest LinkedIn Tumblr


ನವದೆಹಲಿ: ರಂಜಾನ್​ ವಿಶೇಷ ಮಾಸದಲ್ಲಿ ಅಲ್ಲಾನನ್ನು ಸಂತೃಪ್ತಿ ಪಡಿಸುವ ಸಲುವಾಗಿ ತಂದೆಯೊರ್ವ ನಾಲ್ಕು ವರ್ಷದ ಮಗಳನ್ನೇ ಬಲಿ ನೀಡಿರುವ ಘಟನೆ ರಾಜಸ್ತಾನದ ಜೋಧ್​ಪುರದಲ್ಲಿ ನಡೆದಿರುವುದಾಗಿ ಪೊಲೀಸ್​ ವರಿಷ್ಠಾಧಿಕಾರಿ ರಾಜನ್​ ದುಷ್ಯಂತ್​ ತಿಳಿಸಿದ್ದಾರೆ.

ಆರೋಪಿ ನವಾಬ್​ ಆಲಿಯ ಮೊದಲನೇ ಮಗಳಾದ ರಿಜ್ವಾನಳನ್ನು ಬಲಿ ನೀಡಿದ್ದಾನೆ. ಶುಕ್ರವಾರ ಬೆಳಗ್ಗೆ ಕತ್ತು ಸೀಳಿದ ಸ್ಥಿತಿಯಲ್ಲಿ ರಿಜ್ವಾನಳ ಮೃತ ದೇಹ ಮನೆಯಲ್ಲಿ ಪತ್ತೆಯಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಮನೆಯೊಳಗಿನಿಂದ ಲಾಕ್​ ಆಗಿದ್ದರಿಂದ ಅನುಮಾನಗೊಂಡು ತಂದೆಯನ್ನು ವಿಚಾರಣೆಗೆ ಒಳಪಡಿಸಿದ್ದಾಗ ರಂಜಾನ್​ ಸಮಯದಲ್ಲಿ ಅಲ್ಲಾನ ಆಶೀರ್ವಾದ ಪಡೆಯಲು ಮಗಳನ್ನು ಬಲಿ ನೀಡಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಆಲಿ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಗುರುವಾರ ರಾತ್ರಿ ಒಟ್ಟಿಗೆ ಮನೆಯ ಛಾವಣಿ ಮೇಲೆ ಮಲಗಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ರಿಜ್ವಾನ ನಾಪತ್ತೆಯಾಗಿದ್ದಳು. ಮನೆಯವರು ಹುಡುಕಾಡಿದಾಗ ಆಕೆ ಮೃತದೇಹ ನೆಲ ಮಹಡಿಯಲ್ಲಿ ಪತ್ತೆಯಾಗಿತ್ತು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಈ ವೇಳೆ ಆಲಿ ಬೆಕ್ಕು ಎಳೆದುಕೊಂಡು ಹೋಗಿ ರಿಜ್ವಾನಳನ್ನು ಕೊಂದಿರುವುದಾಗಿ ನಂಬಿಸಲು ಪ್ರಯತ್ನಿಸಿದ್ದಾನೆ.

ಕೊಲೆಗೂ ಮುನ್ನ ಆಲಿ ಮಗಳನ್ನು ಮಾರುಕಟ್ಟೆಗೆ ಕರೆದುಕೊಂಡು ಹೋಗಿ ಅವಳಿಗೆ ಬೇಕಾದ ಆಟದ ಸಾಮಾನು ಹಾಗೂ ಸಿಹಿ ತಿಂಡಿಗಳನ್ನು ತಗೆದುಕೊಟ್ಟಿದ್ದಾನೆ. ನಂತರ ಮಧ್ಯರಾತ್ರಿ ಎಲ್ಲರೂ ಗಾಢ ನಿದ್ದೆಯಲ್ಲಿರುವಾಗ ಮಗಳನ್ನು ನೆಲಮಹಡಿಗೆ ತಂದು ಅವಳ ಕತ್ತು ಸೀಳಿ ಕೊಲೆಗೈದು, ನಂತರ ಛಾವಣಿ ಮೇಲೆ ಹೋಗಿ ಮಲಗಿದ್ದ.

Comments are closed.