ರಾಷ್ಟ್ರೀಯ

ರಸ್ತೆಯಲ್ಲಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಹರಿದ ಸರ್ಕಾರಿ ಬಸ್​, ಏಳು ಸಾವು

Pinterest LinkedIn Tumblr


ಉತ್ತರಪ್ರದೇಶ: ಆಗ್ರಾ-ಲಖನೌ ಹೆದ್ದಾರಿ ಬದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಸರ್ಕಾರಿ ಬಸ್​ ಹರಿದು ಏಳು ವಿದ್ಯಾರ್ಥಿಗಳು ಮೃತಪಟ್ಟಿರುವ ಧಾರುಣ ಘಟನೆ ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದೆ.

ಕನೌಜ್​ ಜಿಲ್ಲೆಯ ಸಂತ್​ ಕಬೀರ್​ ನಗರದಲ್ಲಿ​ ಈ ದುರ್ಘಟನೆ ಸಂಭವಿಸಿದ್ದು, ವಿದ್ಯಾರ್ಥಿಗಳು ಆಗ್ರಾಗೆ ಪಿಕ್​ನಿಕ್​ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳು ಪಿಕ್​ನಿಕ್​ಗೆ ತೆರಳುತ್ತಿದ್ದ ಬಸ್​ನಲ್ಲಿ ಡೀಸೆಲ್​ ಖಾಲಿಯಾಗಿತ್ತು. ಹಾಗಾಗಿ ಅವರನ್ನು ಕೆಳಗಿಳಿಸಿದ್ದ ಚಾಲಕ ಡೀಸೆಲ್​ ಹಾಕಿಸಿಕೊಳ್ಳಲು ಬಂಕ್​ಗೆ ತೆರಳಿದ್ದ. ಬಸ್ಸಿಗಾಗಿ ರಸ್ತೆಬದಿ ನಿಂತು ಕಾಯುತ್ತಿದ್ದಾಗ ಹೆದ್ದಾರಿಯಲ್ಲಿ ಹಿಂಬದಿಯಿಂದ ಯಮನಂತೆ ಬಂದ ಸರ್ಕಾರಿ ಬಸ್​ ವಿದ್ಯಾರ್ಥಿಗಳ ಗುಂಪಿನ ಮೇಲೆ ಹರಿದಿದೆ.

ಘಟನೆಯಲ್ಲಿ ಕೆಲ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ ಪಟ್ಟರೆ, ಇನ್ನೂ ಹಲವರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪಾಲಕರಿಗೂ ವಿಷಯ ತಿಳಿಸಲಾಗಿದೆ.

ಈ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮೃತರ ಆತ್ಮಕ್ಕೆ ಸಂತಾಪ ಸೂಚಿಸಿ, ಮೃತರಿಗೆ 2 ಲಕ್ಷ ರೂ., ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

Comments are closed.