ಕರಾವಳಿ

ಕೊಂಚಾಡಿ ವೆಂಕಟರಮಣ ದೇವಸ್ಥಾನ, ವಿ.ಟಿ ರಸ್ತೆಯ ಶ್ರೀ ಕೃಷ್ಣ ಮಂದಿರ ಹಾಗೂ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ಶಾಸಕ ವೇದವ್ಯಾಸ ಕಾಮಾತ್‌ರಿಗೆ ಸನ್ಮಾನ

Pinterest LinkedIn Tumblr

ಕೊಂಚಾಡಿಯಲ್ಲಿ ನೂತನ ಶಾಸಕರಿಗೆ ಸನ್ಮಾನ 

ಮಂಗಳೂರು : ಗೌಡ ಸಾರಸ್ವತ ಸಮಾಜದ ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠ ದ ಅಧೀನದಲ್ಲಿರುವ ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಹಾಗೂ ಪದವಿನಂಗಡಿ ಶ್ರೀ ಗಣೇಶೋತ್ಸವ ಸಮಿತಿ ಜಿ ಯಸ್ ಬಿ ಯುವಕ ವ್ರಂದ ಹಾಗೂ ಮಹಿಳಾ ವ್ರಂದದ ವತಿಯಿಂದ ನೂತನವಾಗಿ ಆಯ್ಕೆಯಾದ ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ ಮತ್ತು ಮಂಗಳೂರು ಉತ್ತರ ಶಾಸಕರಾದ ಡಾ . ಭರತ್ ಶೆಟ್ಟಿ ರವರಿಗೆ ಅಭಿನಂದನಾ ಕಾರ್ಯಕ್ರಮ ಶನಿವಾರ ದೇವಳದ ಶ್ರೀ ಸುಧೀಂದ್ರ ಸಭಾ ಮಂಟಪದಲ್ಲಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿತು.

ಶ್ರೀ ಕೃಷ್ಣ ಮಂದಿರದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಸನ್ಮಾನಿಸಲಾಯಿತು

ಮಂಗಳೂರು : ಪುರುಷೋತ್ತಮ ಮಾಸದ ಸಲುವಾಗಿ ನಗರದ ವಿ.ಟಿ ರಸ್ತೆಯ ಶ್ರೀ ಕೃಷ್ಣ ಮಂದಿರದಲ್ಲಿ ನಡೆದ ಲಕ್ಶ್ಯ ತುಳಸಿ ಹಾಗೂ ಪುಷ್ಪಾರ್ಚನೆ ಯ ಸಂದರ್ಭದಲ್ಲಿ ಮಂಗಳೂರು ದಕ್ಷಿಣದ ನೂತನ ಶಾಸಕ ವೇದವ್ಯಾಸ್ ಕಾಮತ್ ಅವರನ್ನು ಶ್ರೀ ದೇವರ ಸನ್ನಿಧಾನದಲ್ಲಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ದೇವಳದ ಮೊಕ್ತೇಸರರಾದ ಶ್ರೀ ಕುಡ್ಪಿ ಜಗದೀಶ್ ಶೆಣೈ, ಚಂದ್ರನಾಥ್ ಪ್ರಭು, ಮಹೇಶ್ ಪ್ರಭು,ರಾಮಮೋಹನ್ ಹೆಗ್ಡೆ ಅರ್ಚಕ ಕೃಷ್ಣಾನಂದ ಭಟ್, ಶಾರದಾ ಕಮಿಟಿಯ ನರೇಶ್ ಪ್ರಭು ಮತ್ತು ಸದಸ್ಯರು ಹಾಗೂ ಸಂಜಯ್ ಪ್ರಭು,ವಸಂತ್ ಜೆ ಪೂಜಾರಿ,ಮೋಹನ್ ಅಚಾರ್, ಮತ್ತಿತರರು ಉಪಸ್ಥಿತರಿದ್ದರು.

ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ಶಾಸಕ ವೇದವ್ಯಾಸ್ ಕಾಮತ್‌ರಿಗೆ ಸಮ್ಮಾನ :

ಸೇವಾಂಜಲಿ ಸೇವಾ ಟ್ರಸ್ಟ್ ಮತ್ತು ಚೇತನಾ ಬಾಲ ವಿಕಾಸದ ವತಿಯಿಂದ ಶಾಸಕ ವೇದವ್ಯಾಸ್ ಕಾಮತ್ ಅವರನ್ನು ಅಭಿನಂದಿಸ ಲಾಯಿತು. ನಂತರ ಅಲ್ಪ ಸಮಯ ಚೇತನಾ ಬಾಲ ವಿಕಾಸ ಕೇಂದ್ರದ ವಿಶಿಷ್ಟ ಚೇತನ ಮಕ್ಕಳ ಜೊತೆ ಕಾಲ ಕಳೆದರು.

ವಿಶಿಷ್ಟ ಚೇತನ ಮಕ್ಕಳೇ ತಯಾರಿಸಿದ ಪರಿಕರಗಳನ್ನು ಶಾಸಕರಿಗೆ ನೀಡಿ ಗೌರವಿಸಿದರು.ಈ ಸಂಧರ್ಭದಲ್ಲಿ ಸಂಜಯ್ ಪ್ರಭು,ಭಾಸ್ಕರ ಚಂದ್ರ ಶೆಟ್ಟಿ,ವಸಂತ್ ಜೆ ಪೂಜಾರಿ ಮತ್ತು ಸಂಸ್ಥೆಯ ಪಧಾದಿಕಾರಿಗಳು ಉಪಸ್ಥಿತರಿದ್ದರು.

Comments are closed.