ಕರಾವಳಿ

ನುಂಗಿದ 7 ಮೊಟ್ಟೆಗಳನ್ನು ವಾಪಾಸ್ ಕಕ್ಕಿದ ನಾಗರಾಜ! (ವಿಡಿಯೋ)

Pinterest LinkedIn Tumblr

ಉಡುಪಿ: ಜನರನ್ನು ನೋಡಿ ಭಯಗೊಂಡ ನಾಗರಹಾವೊಂದು ತಾನು ಮೊದಲು ನುಂಗಿದ್ದ ಏಳು ಮೊಟ್ಟೆಗಳನ್ನು ವಾಪಾಸ್ ವಾಂತಿ ಮಾಡಿ ಕಕ್ಕಿದ ಘಟನೆ ಉಡುಪಿಯ ಹಾವಂಜೆಯಲ್ಲಿ ನಡೆದಿದೆ.

ವಾರಗಳ ಹಿಂದೆ ಹಾವಂಜೆಯಲ್ಲಿನ ಮನೆಯೊಂದರ ಕೊಟ್ಟಿಗೆಗೆ ನುಸುಳಿದ್ದ ಈ ಹೆಣ್ಣು ನಾಗರಹಾವು ಹೆಂಟೆಯನ್ನು ಕೊಂದು ಅದರ 7 ಮೊಟ್ಟೆಗಳನ್ನು ನುಂಗಿ ಹಟ್ಟಿಯ ಅಟ್ಟದ ಮೇಲೆ ಕುಳಿತಿತ್ತು. ಉರಗ ತಜ್ನ ಉಡುಪಿಯ ಗುರುರಾಜ ಸನಿಲ್ ಅವರು ಹಾವನ್ನು ಕೋಮಲವಾಗಿ ಹಿಡಿದು ಕೆಳಗೆ ತಂದು ಚೀಲಕ್ಕೆ ಸೇರಿಸಿದರೂ ಅತೀವ ಭಯಗೊಂಡಿದ್ದ ಹಾವು ಎಲ್ಲ ಮೊಟ್ಟೆಗಳನ್ನು ವಾಂತಿ ಮಾಡಿ ಪಲಾಯನ ಮಾಡಲು ಪ್ರಯತ್ನಿಸಿತು. ಪುನಃ ಅದನ್ನು ಹಿಡಿದು ಸನಿಲ್ ಅವರು ಅದನ್ನು ಅವರ ಮನೆಗೆ ತಂದು ಶುಶ್ರೂಷೆ ಮಾಡಿದ್ದಲ್ಲದೇ ಹಾವಿಗೆ ಆಹಾರ ನೀಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

Comments are closed.