ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಶೋಪಿಯಾನ್ನ ಕಚ್ಡೂರಾ ಎಂಬ ಹಳ್ಳಿಯಿಂದ ಅಪಹರಿಸಲಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ಜಾವೆದ್ ಮೃತದೇಹ ಡಾಂಗ್ರಾ ಶೋಪಿಯಾನ್ನಲ್ಲಿ ಪತ್ತೆಯಾಗಿದೆ. ಜಾವೆದ್ರ ಹಣೆಗೆ ಗುಂಡೇಟು ತಗುಲಿದ್ದು, ಲಭ್ಯವಾದ ಮಾಹಿತಿ ಅನ್ವಯ ಕಾನ್ಸ್ಟೇಬಲ್ ಜಾವೆದ್ ಔಷಧಿ ತರಲು ಮೆಡಿಕಲ್ ಶಾಪ್ಗೆ ತೆರಳಿದ್ದ ಸಂದರ್ಭದಲ್ಲಿ ಉಗ್ರರು ಆವರನ್ನು ಅಪಹರಣ ಮಾಡಿದ್ದರೆಂದು ತಿಳಿದು ಬಂದಿದೆ. ಗುರುವಾರ ರಾತ್ರಿಯಿಂದಲೇ ನಾಪತ್ತೆಯಾದ ಜಾವೆದ್ಗಾಗಿ ಹುಡುಕಾಟ ಆರಂಭವಾಗಿತ್ತೆನ್ನಲಾಗಿದೆ. ಇನ್ನು ಈ ದುಷ್ಕೃತ್ಯದ ಹಿಂದೆ ಹಿಜ್ಬುಲ್ ಉಗ್ರ ಸಂಘಟನೆಯ ಕೈವಾಡ ಇದೆ ಎಂದು ಹೇಳಲಾಗುತ್ತಿದೆ.
ಜಮ್ಮು ಕಾಶ್ಮೀರದ ಕಚ್ಡೂರಾ ಹಳ್ಳಿಯಿಂದ ಗುರುವಾರ ರಾತ್ರಿ ಕಾರಿನಲ್ಲಿ ಬಂದಿದ್ದ ಮೂವರು ಉಗ್ರರು ಪೊಲೀಸ್ ಕಾನ್ಸ್ಟೇಬಲ್ ಜಾವೆದ್ ಅಹಮದ್ ಡಾರ್ರನ್ನು ಅಪಹರಿಸಿದ್ದರು. ಜಾವೆದ್ ಮಾಜಿ ಸೂಪರಿಟೆಂಡೆಂಟ್ ಆರ್ಫ ಪೊಲೀಸ್ ಆಗಿದ್ದ ಶಾಲಿಂದರ್ ಮಿಶ್ರಾರವರ ಪರ್ಸನಲ್ ಬಾಡಿ ಗಾರ್ಡ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಈವರೆಗೆ ಲಭ್ಯವಾದ ಮಾಹಿತಿ ಅನ್ವಯ ಕಾರಿನಲ್ಲಿ ಬಂದಿದ್ದ ಉಗ್ರರು ಅವರ ಮನೆಯ ಆಸುಪಾಸಿನಲ್ಲಿ ಹಲವಾರು ಬಾರಿ ಸುತ್ತಾಡಿರುವುದು ಕಂಡು ಬಂದಿದೆ. ಹೀಗಿರುವ ಜಾವೆದ್ ಔಷಧಿ ತರಲೆಂದು ಮೆಡಿಕಲ್ ಶಾಪ್ಗೆ ತೆರಳಿದ್ದು, ಈ ಸಂದರ್ಭದಲ್ಲಿ ಉಗ್ರರು ಅವರನ್ನು ಅಹರಣ ಮಾಡಿದ್ದರೆನ್ನಲಾಗಿದೆ.
ಸರಿ ಸುಮಾರು ಒಂದು ತಿಂಗಳ ಹಿಂದಷ್ಟೇ ಸೇನಾ ಯೋಧ ರೈಫಲ್ಮ್ಯಾನ್ ಔರಂಗಜೇಬ್ ಎಂವರು ಈದ್ ಹಬ್ಬದ ಆಚರಣೆಗಾಗಿ ರಜೆ ಪಡೆದು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಉಗ್ರರು ಅವರನ್ನು ಅಪಹರಿಸಿದ್ದರು. ಇದಾದ ಮರುದಿನವೇ ಗುಂಡೇಟುಗಳಿಂದ ರಕ್ತಸಿಕ್ತವಾಗಿದ್ದ ಅವರ ಮೃತದೇಹ ಪತ್ತೆಯಾಗಿತ್ತು.
ಕಳೆದ ವರ್ಷ ಕೂಡಾ ಸೇನಾ ಯೋಧ ಉಮರ್ ಫಯಾಜ್ ಎಂಬವರನ್ನು ಅಪಹರಿಸಿದ್ದ ಉಗ್ರರು ಹತ್ಯೆಗೈದಿದ್ದರು. ಅವರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಿಡ್ನ್ಯಾಪ್ ಮಾಡಲಾಗಿತ್ತು.
Comments are closed.