ಕರ್ನಾಟಕ

ಭತ್ತದ ಗದ್ದೆಯಲ್ಲಿ ಮೋದಿ, ಅಮಿತ್ ಶಾ, ಯಡಿಯೂರಪ್ಪ!

Pinterest LinkedIn Tumblr


ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೊಲಗದ್ದೆಗಳಲ್ಲಿ ಕಟೌಟ್ ಗಳಾಗುವ ಮೂಲಕ ರೈತ ಸ್ನೇಹಿಯಾಗಿದ್ದಾರೆ.

ಹೌದು. ಚಿಕ್ಕಮಗಳೂರು ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಭತ್ತದ ಗದ್ದೆಯಲ್ಲಿ ಈ ಮೂವರು ಬಿಜೆಪಿ ನಾಯಕರ ಕಟೌಟ್ ಗಳನ್ನು ಕಾವಲು ಕಾಯಲು ಬಳಕೆ ಮಾಡಲಾಗಿದೆ.

ಚುನಾವಣೆಯಲ್ಲಿ ಬಳಸಿದ ಕಟೌಟ್ ಗಳನ್ನು ಇದೀಗ ರೈತರು ತಮ್ಮ ಜಮೀನಿನಲ್ಲಿ ಬೆಳೆ ಹಾಳು ಮಾಡುವ ಪ್ರಾಣಿ, ಪಕ್ಷಿಗಳನ್ನು ಬೆದರಿಸಲು ಬಳಸಿದ್ದಾರೆ. ರೈತರ ಜಮೀನಿನಲ್ಲಿ ಮೋದಿ, ಶಾ ಮತ್ತು ಬಿಎಸ್‍ವೈ ಕಟೌಟುಗಳು ರಾರಾಜಿಸುತ್ತಿದ್ದು, ನೋಡುಗರಿಗೆ ಮನರಂಜನೆ ನೀಡುತ್ತಿವೆ.

Comments are closed.