ಕರ್ನಾಟಕ

ಮಹಿಳೆಯೊಬ್ಬರ ಜತೆಗಿನ ಲೈಂಗಿಕ ಹಗರಣದ ಆರೋಪ ಎದುರಿಸುತ್ತಿರುವ ಎಸ್‌ಪಿ ಗುಳೇದ್‌ ಎತ್ತಂಗಡಿ

Pinterest LinkedIn Tumblr

ಬೆಂಗಳೂರು: ದಾವಣಗೆರೆಯ ಉದ್ಯಮಿ ಮಹಿಳೆಯೊಬ್ಬರ ಜತೆಗಿನ ಲೈಂಗಿಕ ಹಗರಣದ ಆರೋಪ ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ್‌ ಗುಳೇದ್‌ ಅವರನ್ನು ಯಾವುದೇ ಹುದ್ದೆ ನೀಡದೆ ಸರಕಾರ ಸೋಮವಾರ ಎತ್ತಂಗಡಿ ಮಾಡಿದೆ.

ಖಾಸಗಿ ಟಿವಿ ವಾಹಿನಿಯಲ್ಲಿ ಈ ಬಗ್ಗೆ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಸರಕಾರ ಈ ಬಗ್ಗೆ ವರದಿ ನೀಡುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಿತ್ತು. ವರದಿ ಲಭ್ಯವಾಗುತ್ತಿದ್ದಂತೆ, ಯಾವುದೇ ಹುದ್ದೆ ನೀಡದೆ ಗುಳೇದ್‌ ಅವರನ್ನು ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಬೆಂಗಳೂರು ನಗರ ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಟಿ.ಪಿ.ಶಿವಕುಮಾರ್‌ ಅವರನ್ನು ನಿಯೋಜಿಸಲಾಗಿದೆ.

ಈ ನಡುವೆ, ಲೋಕಾಯುಕ್ತ ಎಸ್ಪಿ ಡಾ. ಸುಮನಾ ಡಿ. ಪೇಣ್ಕರ್‌ ಅವರನ್ನು ಮಡಿಕೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸರಕಾರ ನಿಯೋಜಿಸಿದೆ.

Comments are closed.