ಮಂಡ್ಯ: ನೀರಿನ ಪ್ರವಾಹವಿದ್ದರೂ ಸರಿ ಈಜಿ ದಡ ಸೇರುತ್ತೇನೆ ಎಂದು ಸ್ನೇಹಿತನೊಂದಿಗೆ ಚಾಲೆಂಜ್ ಹಾಕಿ ನೀರಿಗೆ ಹಾರಿದ ಯುವಕ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ.
ಹರಿಹರಪುರದ ಶಿವು ತನ್ನ ಸ್ನೇಹಿತನ ಜತೆ ತುಂಬಿ ಹರಿಯುತ್ತಿರುವ ಹೇಮಾವತಿ ನದಿ ನೋಡಲು ಕೆ.ಆರ್.ಪೇಟೆ ಬಳಿ ಇರುವ ಹರಿಹರಪುರ ಬ್ರಿಜ್ಗೆ ತೆರಳಿದ್ದ. ಅಲ್ಲಿ ಹೋದವನು ಸುಮ್ಮನಿರಲಾಗದೆ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹೇಮೆಯಲ್ಲಿ ಈಜಿ ದಡ ಸೇರುತ್ತೇನೆ ನೋಡು ಎಂದು ಸ್ನೇಹಿತನ ಬಳಿ ಚಾಲೆಂಜ್ ಮಾಡಿ ನೀರಿಗೆ ಧುಮುಕಿದ. ಆದರೆ, ನೀರಿಗೆ ಬಿದ್ದೊಡನೆ ಅವನು ಎಲ್ಲಿ ಹೋದ ಎಂದು ಕಾಣಿಸುತ್ತಿಲ್ಲ. ದೃಶ್ಯವನ್ನು ಸೇತುವೆ ಮೇಲೆ ನಿಂತ ಅವನ ಸ್ನೇಹಿತ ವಿಡಿಯೋ ಮಾಡಿದ್ದಾನೆ.
ಅಗ್ನಿಶಾಮಕದಳ ಸಿಬ್ಬಂದಿ ಶಿವುಗಾಗಿ ಹುಡುಕಾಟ ನಡೆಸಿದ್ದಾರೆ. ತಹಸೀಲ್ದಾರ್ ಶಿವಮೂರ್ತಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಶಿವು ಅವರಿಗೆ ಒಂದು ಗಂಡು, ಇನ್ನೊಂದು ಹೆಣ್ಣು ಮಗುವಿದ್ದು ಈಗ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
Comments are closed.