ಕರ್ನಾಟಕ

ಶೀಘ್ರದಲ್ಲಿಯೇ ಸಮ್ಮೀಶ್ರ ಸರಕಾರ ಪತನ: ಕಾಂಗ್ರೆಸ್‌ ನಾಯಕ!

Pinterest LinkedIn Tumblr


ತುಮಕೂರು: ರಾಜ್ಯದಲ್ಲಿ ಆಧಿಕಾರ ನಡೆಸುತ್ತಿರುವ ಕೈ-ದಳ ಸರಕಾರ ಶೀಘ್ರದಲ್ಲಿಯೇ ಪತನವಾಗಲಿದೆ ಎಂದು ಕಾಂಗ್ರೆಸ್​ ನಾಯಕ ಕೆ.ಎನ್​ ರಾಜಣ್ಣ ಭವಿಷ್ಯ ನುಡಿದಿದ್ದಾರೆ. ಮೈತ್ರಿ ಸರ್ಕಾರದ ಕಾರ್ಯವೈಖರಿ ನೋಡಿದೆರೆ, ಇದಕ್ಕೆ ಆಯುಷ್ಯ ಕಡಿಮೆ ಎಂದನಿಸುತ್ತದೆ.ಎಂದು ಹೇಳಿದರು.

ಲೋಕೋಪಯೋಗಿ ಸಚಿವರಾಗಿರುವ ರೇವಣ್ಣ ಬೇರೆ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹೆಣ್ಣುಮಕ್ಕಳಂತೆ ಅಳುತ್ತಾರೆ, ಅವರು ಅತ್ತದ್ದು ಸಂಸತ್ತಿನಲ್ಲಿ ಚರ್ಚೆ ಆಗುತ್ತದೆ. ಅಳುವುದು ರಾಜ್ಯದ ಜನತೆಗೆ ಮಾಡಿದ ಅವಮಾನ. ಸಿಎಂ ಈ ನಡೆಯಿಂದ ಕಾಂಗ್ರೆಸ್ ಇಮೇಜ್ ಗೆ ಧಕ್ಕೆಆಗಿದೆ. ಚುನಾವಣೆ ವೇಳೆ ಮತಕ್ಕಾಗಿ ಅಳೋದು ನೋಡಿದ್ದೇವೆ. ಆದ್ರೆ ಈಗ ಅಳುವುದು ಸರಿಯಲ್ಲ ಎಂದು ಹೇಳಿದ್ಲೋದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ತುಮಕೂರು ಕ್ಷೇತ್ರದಲ್ಲಿ ಹಾಲಿ ಪಕ್ಷದ ಸಂಸದರಿದ್ದಾರೆ. ಹೀಗಾಗಿ ಕ್ಷೇತ್ರ ಬಿಟ್ಟುಕೊಡಬಾರದು. ಒಂದು ವೇಳೆ ಜೆಡಿಎಸ್ ಗೆ ಬಿಟ್ಟು ಕೊಟ್ಟರೆ ನಾನು ಕಣಕ್ಕಿಳಿಯುವುದು ಗ್ಯಾರಂಟಿ. ಇಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments are closed.