ಕರ್ನಾಟಕ

ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಲಾಠಿ ಏಟು ನೀಡುತ್ತಿದ್ದ ಪೇದೆ ಅಮಾನತು

Pinterest LinkedIn Tumblr


ಬೆಂಗಳೂರು: ಕುಡಿದ ಅಮಲಿನಲ್ಲಿ ಪೊಲೀಸ್ ಪೇದೆ ರಂಪಾಟ ಪ್ರಕರಣ ಪೇದೆ ಬಾಲಾಜಿ ನಾಯ್ಕ್​ನನ್ನು​​​ ಅಮಾನತು ಮಾಡಿ ಸಂಚಾರಿ ವಿಭಾಗದ ಡಿಸಿಪಿ ಅನುಪಮ್ ಅಗರವಾಲ್ ಗುರುವಾರ ಆದೇಶ ಹೊರಡಿಸಿದ್ದಾರೆ.

ಮೈಕೋಲೇಔಟ್ ಸಂಚಾರಿ ಠಾಣೆಯ ಪೇದೆ ಬಾಲಾಜಿ ನಾಯ್ಕ್​ ಬುಧವಾರ ರಾತ್ರಿ ಹೆಬ್ಬಾಳ ಪೊಲೀಸ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ಕುಡಿದ ಅಮಲಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಲಾಠಿ ಚಾರ್ಜ್​ ಮಾಡುತ್ತಿದ್ದ. ಇದನ್ನು ನೋಡಿದ ಸ್ಥಳೀಯರು ಕಟ್ಟದ ಮೇಲಿಂದ ಪೇದೆಯ ರಂಪಾಟವನ್ನು ವಿಡಿಯೋ ಮಾಡಿದ್ದರು.

ಮೊದಲು ದೂರು ನೀಡಿದರೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಡಿಸಿಪಿ ಅನುಪಮ ಅಗರ್​ವಾಲ್ ಅವರು​ ಕರ್ತವ್ಯನಿರತ ಪೇದೆಯ ದಾಂಧಲೆ ಸ್ಪಷ್ಟವಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿರುವುದಾಗಿ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿದ್ದಾರೆ.

Comments are closed.