ಬೆಂಗಳೂರು: ಕುಡಿದ ಅಮಲಿನಲ್ಲಿ ಪೊಲೀಸ್ ಪೇದೆ ರಂಪಾಟ ಪ್ರಕರಣ ಪೇದೆ ಬಾಲಾಜಿ ನಾಯ್ಕ್ನನ್ನು ಅಮಾನತು ಮಾಡಿ ಸಂಚಾರಿ ವಿಭಾಗದ ಡಿಸಿಪಿ ಅನುಪಮ್ ಅಗರವಾಲ್ ಗುರುವಾರ ಆದೇಶ ಹೊರಡಿಸಿದ್ದಾರೆ.
ಮೈಕೋಲೇಔಟ್ ಸಂಚಾರಿ ಠಾಣೆಯ ಪೇದೆ ಬಾಲಾಜಿ ನಾಯ್ಕ್ ಬುಧವಾರ ರಾತ್ರಿ ಹೆಬ್ಬಾಳ ಪೊಲೀಸ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ಕುಡಿದ ಅಮಲಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದ. ಇದನ್ನು ನೋಡಿದ ಸ್ಥಳೀಯರು ಕಟ್ಟದ ಮೇಲಿಂದ ಪೇದೆಯ ರಂಪಾಟವನ್ನು ವಿಡಿಯೋ ಮಾಡಿದ್ದರು.
ಮೊದಲು ದೂರು ನೀಡಿದರೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಡಿಸಿಪಿ ಅನುಪಮ ಅಗರ್ವಾಲ್ ಅವರು ಕರ್ತವ್ಯನಿರತ ಪೇದೆಯ ದಾಂಧಲೆ ಸ್ಪಷ್ಟವಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿರುವುದಾಗಿ ದಿಗ್ವಿಜಯ ನ್ಯೂಸ್ಗೆ ಪ್ರತಿಕ್ರಿಯಿಸಿದ್ದಾರೆ.
Comments are closed.