ಜಮ್ಶೇದ್ಪುರ : ಆರು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಜೋಡಿಯೊಂದು ಸೆರಾಯ್ಕೇಲಾ – ಖರ್ಸವಾನ್ ಜಿಲ್ಲೆಯ ಗ್ರಾಮದಲ್ಲಿನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮನೆಯೊಳಗಿಂದ ಯಾವುದೇ ಉತ್ತರ ಬಾರದಿದ್ದಾಗ ನೆರೆಹೊರೆಯವರು ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರು ಧಾವಿಸಿ ಬಂದು ಕೊನೆಗೆ ಮನೆಯ ಬಾಗಿಲನ್ನು ಮುರಿದು ಒಳಪ್ರವೇಶಿಸಿದಾಗ ಅಲ್ಲಿ ಯುವ ದಂಪತಿ ನೇಣಿಗೆ ಶರಣಾಗಿದ್ದುದು ಕಂಡು ಬಂತು. ಅಲ್ಲೇ ಪೊಲೀಸರಿಗೆ ಡೆತ್ ನೋಟ್ ಕೂಡ ಸಿಕ್ಕಿತು.
ಪೊಲೀಸರು ಯುವ ಜೋಡಿಯ ಹೆತ್ತವರಿಗೆ ವಿಷಯ ತಿಳಿಸಿ ಪ್ರಶ್ನಿಸಿದಾಗ, “ಅವರ ಮದುವೆಗೆ ನಮ್ಮದೇನೂ ಆಕ್ಷೇಪ ಇರಲಿಲ್ಲ’ ಎಂದು ಉತ್ತರಿಸಿರುವುದಾಗಿ ತಿಳಿದು ಬಂದಿದೆ.
Comments are closed.