ಮನೋರಂಜನೆ

ದುನಿಯಾ ವಿಜಿ​​, ದರ್ಶನ್ ಕುರಿತು ಅಂಬಿ ಹೇಳಿದ್ದೇನು?

Pinterest LinkedIn Tumblr


ಬೆಂಗಳೂರು: ನಟ ದುನಿಯಾ ವಿಜಯ್​​ ಅವರು ಜೈಲುಪಾಲಾಗಿ ಯಾರು ನೋಡಲು ಬಂದಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಮೊದಲೆಲ್ಲ ಬುದ್ದಿ ಹೇಳಿದ್ರೆ ಕೇಳಿಲ್ಲ, ಮತ್ತೆ ಏನಂತ ಬುದ್ದಿ ಹೇಳಲಿ. ನಾನು ಹೋಗುವುದಿಲ್ಲ ಎಂದು ಹೇಳುತ್ತಿಲ್ಲ, ಆದರೆ, ನನಗೆ ಹಿಂಸೆ ಆಗುತ್ತಿದೆ. ಹೀಗಾಗಿ ಹೇಗೆ ಹಿಂಸೆಯಿಂದ ಹೋಗಲಿ ಎಂದು ಮಾಜಿ ಸಚಿವ, ಹಿರಿಯ ನಟ ರೆಬೆಲ್​​ ಸ್ಟಾರ್​​ ಅಂಬರೀಶ್​​ ಅವರು ಇಂಗಿತ ವ್ಯಕ್ತಪಡಿಸಿದ್ಧಾರೆ.

ಇದೆ ವೇಳೆ ನಟ ದರ್ಶನ್ ಅವರ ಅಪಘಾತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಂಬರೀಶ್ ಅವರು, ಅದು ಒಂದು ಆ್ಯಕ್ಸಿಡೆಂಟ್ ಅಷ್ಟೇ. ಹುಡುಗರಿಗೆ ಹುಮ್ಮಸ್ಸು ಜಾಸ್ತಿ ವೇಗವಾಗಿ  ಓಡಿಸಬೇಕು ಅಂತಾ ಓಡಿಸ್ತಾರೆ. ಹುಷಾರಾಗಿ ಓಡಿಸಿ ಓಡಿಸಲೇಬಾರದು ಎಂದು ನಾನು ಹೇಳುವುದಿಲ್ಲ. ಆದರೆ, ಎಚ್ಚರಿಕೆಯಿಂದ ಓಡಿಸಬೇಕು ಎಂದು ದರ್ಶನ್​ಗೆ ಬುದ್ದಿಮಾತು ಹೇಳಿದರು.

ಜಿಮ್ ಟ್ರೈನರ್ ಮಾರುತಿಗೌಡ ಎಂಬುವವರನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಬಂಧನಕ್ಕೀಡಾಗಿದ್ದಾರೆ. ಪ್ರಸ್ತುತ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ಸ್​ ಪೊಲೀಸ್​​ ಠಾಣೆಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.

ಇನ್ನು ಹಲವು ಬಾರಿ ಕಾನೂನು ಬಾಹಿರ ಕೃತ್ಯ ನಡೆಸುತ್ತಿರುವ ವಿಜಯ್​ ಮೇಲೆ ರೌಡಿ ಶೀಟರ್​ ತೆರೆಯಲು ಕೂಡ​ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹೊಡೆದಾಟ, ಬೆದರಿಕೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮಾಜಿ ಯೋಧರ ಮೇಲೆ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಿಜಯ್​ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಮಾಸ್ತಿಗುಡಿ ಚಿತ್ರೀಕರಣ ವೇಳೆ ನಟರಿಬ್ಬರ ಸಾವಿಗೆ ಸಂಬಂಧಿಸಿದ ಕೇಸ್​ನಲ್ಲಿ ವಿಜಯ್​ಗೆ ಶಿಕ್ಷೆಯಾಗಿತ್ತು. ನಿರ್ದೇಶಕ ಪಿ.ಸುಂದರ್​ ಬಂಧನಕ್ಕೆ ಆಗಮಿಸಿದ್ದ ಪೊಲೀಸರ ಕಣ್ಣುತಪ್ಪಿಸಿ ಆರೋಪಿ ಪರಾರಿಯಾಗಲು ಸಹಾಯ ಮಾಡಿದ್ದರು. ಅಂತೆಯೇ ನಿರ್ಮಾಪಕ ಸುಂದರಗೌಡ ಅಣ್ಣನ ಪ್ರಕರಣದಲ್ಲಿಯೂ ಭಾಗಿಯಾಗಿದ್ದ ವಿಜಿ ಸುಮಾರು ಆರಫೊಗಳನ್ನು ಎದುರಿಸುತ್ತಿದ್ದಾರೆ.

Comments are closed.