ರಾಷ್ಟ್ರೀಯ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಒಬ್ಬ ಹುಚ್ಚ: ಸ್ವಾಮಿ ಪ್ರಸಾದ್ ಮೌರ್ಯ

Pinterest LinkedIn Tumblr


ಆಗ್ರಾ: ಕಾಂಗ್ರೆಸ್ ಅಧ್ಯಕ್ಷ ಅವರೊಬ್ಬ ಹುಚ್ಚ, ಅವರದು ಬಾಲಿಶ ಬುದ್ಧಿ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹೊಸ ವಿವಾದವನ್ನು ತಲೆಗೆಳೆದುಕೊಂಡಿದ್ದಾರೆ.

ಮೈನ್ಪುರಿಯಲ್ಲಿ ವರದಿಗಾರರೊಂದಿಗೆ ಮಾತನ್ನಾಡುತ್ತಿದ್ದ ಮೌರ್ಯ, ರಾಹುಲ್ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದರು. ”ರಾಹುಲ್ ಒಬ್ಬ ಹುಚ್ಚ, ಅವರದು ಬಾಲಿಶ ಬುದ್ಧಿ. ಪ್ರಧಾನಿ ವಿರುದ್ಧ ಗಾಂಧಿ ಕುಟುಂಬದ ಕುಡಿ ರಾಹುಲ್ ಪ್ರಯೋಗಿಸಿರುವ ಅವಹೇಳನಕಾರಿ ಭಾಷೆ ದೇಶದ ಅತಿ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಅಧ್ಯಕ್ಷರಾಗಲು ಅವರು ಅನರ್ಹರು ಎಂಬುದನ್ನು ಸಾಬೀತುಪಡಿಸಿದೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಕ್ಕೆ ಅವರು ಹೀಗೆ ವರ್ತಿಸುತ್ತಿದ್ದಾರೆ, ” ಎಂದು ಜರಿದಿದ್ದಾರೆ.

ಸಂಸತ್ತಿನಲ್ಲಿ ಪ್ರಧಾನಿ ಮೋದಿಗೆ ಅಪಮಾನ ಮಾಡಲು ಅವರು ನಾಟಕವನ್ನಾಡಿದ ಅವರು ತಮ್ಮ ಸ್ನೇಹಿತರತ್ತ ನೋಡುತ್ತ ಕಣ್ಣು ಮಿಟುಕಿಸಿದರು. ಅವರ “ಅಪಕ್ವ ವರ್ತನೆ”ಯನ್ನು ಎಲ್ಲರೂ ನೋಡುವಂತಾಯಿತು ಎಂದರು.

ಪ್ರಧಾನಿಯ ಹೊಗಳಿಕೆಗೆ ನಿಂತ ಅವರು, ಮೋದಿ ಅವರ ವ್ಯಕ್ತಿತ್ವ, ಮಾಡಿರುವಂಥ ಕೆಲಸ ಮತ್ತು ಅಭಿವೃದ್ಧಿಯತ್ತ ದೇಶವನ್ನು ಕೊಂಡೊಯ್ಯುತ್ತಿರುವುದು ಅಮೇರಿಕಾದಂಥಹ ಅಭಿವೃದ್ಧಿ ಹೊಂದಿರುವ ದೇಶಗಳಿಂದಲೂ ಮೆಚ್ಚುಗೆಗೆ ಕಾರಣವಾಗಿದೆ. ಅಮೇರಿಕಾದ ಅಧ್ಯಕ್ಷರು ಕೂಡ ತಮ್ಮ ಚುನಾವಣಾ ಪ್ರಚಾರದಲ್ಲಿ ಮೋದಿ ಅವರ ಅಭಿವೃದ್ಧಿ ಪರ ಕಾರ್ಯಗಳ ಬಗ್ಗೆ ಉಲ್ಲೇಖಿಸಿದ್ದಾರೆ ಎಂದರು.

Comments are closed.