ರಾಷ್ಟ್ರೀಯ

ಸಾರ್ವಜನಿಕ ಸ್ಥಳದ ಗೋಡೆಯೊಂದರ ಮೇಲೆ ಮೂತ್ರ ಮಾಡಿ ‘ಪರಂಪರೆ’ ಎಂದ ರಾಜಸ್ಥಾನ ಸಚಿವ

Pinterest LinkedIn Tumblr


ಅಜ್ಮೀರ್: ರಾಜಸ್ಥಾನದ ಸಚಿವ ಶಂಭು ಸಿಂಗ್ ಖತೇಸರ್ ಸಾರ್ವಜನಿಕ ಸ್ಥಳದ ಗೋಡೆಯೊಂದರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ತೆರೆದ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಹಳೆಪರಂಪರೆ ಎಂದು ಹೇಳುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಸಚಿವರು ಮೂತ್ರ ವಿಸರ್ಜನೆ ಮಾಡಿದ ಸ್ಥಳದ ಪಕ್ಕದಲ್ಲಿಯೇ ಬಿಜೆಪಿ ಪಕ್ಷದ ರ‍್ಯಾಲಿಯೊಂದನ್ನು ಆಯೋಜಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನವನ್ನು ಪ್ರಶ್ನಿಸತೊಡಗಿದ್ದಾರೆ.

ಬಯಲು ಪ್ರದೇಶದಲ್ಲಿ ಬಹಿರ್ದೆಸೆ ನಡೆಸುವುದು ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಆದರೆ, ಮೂತ್ರ ವಿಸರ್ಜನೆಯಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದಿರು ಸಚಿವ ಶಂಭು ಸಿಂಗ್, ‘ನಾನು ಮೂತ್ರ ವಿಸರ್ಜಿಸಿದ ಸಮೀಪ ಯಾವುದೇ ಶೌಚಾಲಯಗಳು ಇರಲಿಲ್ಲ. ಅನಿವಾರ್ಯವಾಗಿ ತೆರದ ಪ್ರದೇಶದಲ್ಲಿ ಮೂತ್ರ ವಿಸರ್ಜಿಸಬೇಕಾಯಿತು ಎಂದು ನುನುಚಿಕೊಂಡಿದ್ದಾರೆ.

Comments are closed.