ಕರ್ನಾಟಕ

ಸಮ್ಮಿಶ್ರ ಸರ್ಕಾರದ ಆಯಸ್ಸು ಎರಡು ತಿಂಗಳು ಮಾತ್ರ; ಕೋಡಿಶ್ರೀ ಭವಿಷ್ಯ

Pinterest LinkedIn Tumblr


ಹಾಸನ: ಬಹುಜನ ಸಮಾಜವಾದಿ ಪಕ್ಷದ ಏಕೈಕ ಶಾಸಕ ಮತ್ತು ಶಿಕ್ಷಣ ಸಚಿವ ಎನ್​. ಮಹೇಶ್​ ರಾಜೀನಾಮೆ ರಾಜ್ಯ ರಾಜಕಾರಣವನ್ನು ತಲ್ಲಣಗೊಳಿಸಿದೆ. ಇದರ ಬೆನ್ನಲ್ಲೇ ಸರ್ಕಾರ ಪತನವಾಗಲಿದೆ ಎಂದು ಕೋಡಿಶ್ರೀ ಭವಿಷಯ ನುಡಿದಿದ್ದಾರೆ.

ಹಾಸನದಲ್ಲಿ ಮಾತನಾಡಿದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಮ್ಮಿಶ್ರ ಸರ್ಕಾರ ಇನ್ನೆರಡು ತಿಂಗಳಲ್ಲಿ ಮುರಿದು ಬೀಳಲಿದೆ ಎಂದಿದ್ದಾರೆ. ಈ ವರ್ಷ ಪೂರ್ತಿ ಮಳೆಗಾಲ ಮುಂದುವರೆಯಲಿದ್ದು ಸರ್ಕಾರದ ಭವಿಷ್ಯ ಇನ್ನೆರಡು ತಿಂಗಳಲ್ಲಿ ತಿಳಿಯಲಿದೆ ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿರುವ ನಾಯಕರ ನಡುವೆ ಅಸೂಯೆ ಮತ್ತು ದ್ವೇಷ ರಾಜಕಾರಣ ಹೆಚ್ಚಾಗಲಿದೆ. ಅದರಿಂದ ಸರ್ಕಾರ ಏನಾಗಲಿದೆ ಎಂಬುದು ಎರಡು ತಿಂಗಳುಗಳಲ್ಲಿ ತಿಳಿಯಲಿದೆ ಎಂಬುದಾಗಿ ಕೋಡಿ ಶ್ರೀಗಳು ಹೇಳಿದ್ದಾರೆ. ಒಂದೆಡೆ ಸಮ್ಮಿಶ್ರ ಸರ್ಕಾರದ ಮೊದಲ ವಿಕೆಟ್​ ಎನ್​ ಮಹೇಶ್​ರ ರಾಜೀನಾಮೆ ಮೂಲಕ ಪತನವಾಗಿದೆ. ಇತ್ತ ಮಾಜಿ ಪ್ರಧಾನಿ ದೇವೇಗೌಡರ ಜಿಲ್ಲೆಯವರೇ ಆದ ಕೋಡಿ ಶ್ರೀಗಳು ಸರ್ಕಾರ ಮುರಿದು ಬೀಳಲಿದೆ ಎಂಬ ಮಾತಿಗಳನ್ನಾಡಿದ್ದಾರೆ.

Comments are closed.