ಹೈದ್ರಾಬಾದ್: ತೆಲಂಗಾಣ ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕಿ ವಿಜಯಶಾಂತಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇದಿಕೆ ಸಂಪೂರ್ಣವಾಗಿ ಕುಸಿದು ಬಿದಿದ್ದು, ಅವರು ಕೆಳಗೆ ಬಿದ್ದ ಘಟನೆ ಮೆಹಬೂಬ್ ನಗರದ ಅಚಂಪೇಟ್ನಲ್ಲಿ ನಡೆದಿದೆ.
ವೇದಿಕೆಯಲ್ಲಿ ವಿಜಯಶಾಂತಿ ನಡೆದು ಹೋಗುವಾಗ ಈ ಘಟನೆ ನಡೆದಿದ್ದು, ವಿಜಯಶಾಂತಿ ಅವರಿಗೆ ಯಾವುದೇ ಗಾಯಗಳಾಗಿಲ್ಲ.
ವೇದಿಕೆಯ ಮೇಲೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತಿತ್ತರು ನಾಯಕರಿದ್ದು, ಅವರು ಕೂಡ ಕೆಳಗೆ ಬಿದ್ದಿದ್ದಾರೆ. ತಕ್ಷಣಕ್ಕೆ ಕಾರ್ಯಕರ್ತರು ತಮ್ಮ ಮುಖಂಡರ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.
ವೇದಿಕೆಯಲ್ಲಿ ಅಧಿಕ ಜನರು ಜಮಾಯಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ನಟಿ, ರಾಜಕಾರಣಿ ವಿಜಯಶಾಂತಿ ಚುನಾವಣಾ ಪ್ರಚಾರ ನಡೆಸುತ್ತಿರುವ ಹಿನ್ನಲೆಯಲ್ಲಿ ಅವರ ಪ್ರಚಾರಕ್ಕೆ ಜನಸಾಗರವೇ ಹರಿದುಬರುತ್ತಿದೆ.
Comments are closed.