ಬೆಂಗಳೂರು: ಮಂಡ್ಯದಲ್ಲಿ ಮೂರು ಬಾರಿ ಸಂಸದರಾಗಿದ್ದ, ಕಳೆದ ಬಾರಿ ಮಂಡ್ಯ ಕ್ಷೇತ್ರದಿಂದ ಗೆದ್ದು ಮಂತ್ರಿಯೂ ಆಗಿದ್ದ ಹಿರಿಯ ನಟ ಅಂಬರೀಶ್ ಅವರ ಮನೆಗೆ ಇಂದು ಭೇಟಿ ನೀಡಿದ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ಎಲ್ ಆರ್. ಶಿವರಾಮೇಗೌಡ ಬೆಂಬಲ ಯಾಚಿಸಿದರು.
ಮಂಡ್ಯ ರಾಜಕಾರಣದಿಂದ ವಿಮುಖರಾಗಿರುವ ಅಂಬರೀಶ್ ಅವರ ಭೇಟಿ ವೇಳೆ ಶಿವರಾಮೇಗೌಡರು, ಪ್ರಚಾರಕ್ಕೆ ಬರುವಂತೆಯೂ, ಈ ಚುನಾವಣೆಯನ್ನು ತಮ್ಮ ಪರವಾಗಿ ನೆರವೇರಿಸಿಕೊಡುವಂತೆಯೂ, ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಬೆಂಬಲಿಸಲು ತಿಳಿಸುವಂತೆಯೂ ಮನವಿ ಮಾಡಿದರು ಎನ್ನಲಾಗಿದೆ.
ಆದರೆ, ಪ್ರಚಾರಕ್ಕೆ ಬರುವ ಬಗ್ಗೆ ಏನನ್ನೂ ಹೇಳದ ಅಂಬರೀಶ್. “ನಿಂತ ಎಲ್ಲ ಚುನಾವಣೆಗಳಲ್ಲೂ ಸೋತಿದ್ದೀಯ. ಈ ಬಾರಿಯಾದರೂ ಗೆಲ್ಲು,” ಎಂದು ಹರಸಿದರು ಎನ್ನಲಾಗಿದೆ.
Comments are closed.