ನವದೆಹಲಿ: ಜಾಗತೀಕರಣದ ನಂತರದಲ್ಲಿ ಸಣ್ಣಪುಟ್ಟ ವ್ಯಾಪರಿಗಳು ತಮ್ಮ ವ್ಯಾಪರದಿಂದ ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿ ಸಿಲುಕುವ ಕಥೆಗಳನ್ನೇ ಹೆಚ್ಚು ಕೇಳುತ್ತಾ ಬರುತ್ತಿದ್ದೇವೆ. ಆದರೆ, ಇಲ್ಲಿ ಓರ್ವ ಸಣ್ಣ ವ್ಯಾಪರಿ ಹೇಗೆ ಕೋಟಿಕೋಟಿ ಸಂಪಾದಿಸುತ್ತಾನೇ? ಅವನ ಕೋಟಿ ಕಥೆ ಬೆಳಕಿಗೆ ಬಂದಿದ್ದು ಹೇಗೆಂಬ? ಒಂದು ಆಶ್ಚರ್ಯಕರ ಕಥೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ ಓದಿ…
ಪಂಜಾಬ್ ಮೂಲದ ಸಣ್ಣ ವ್ಯಾಪರಿಯೋರ್ವ ತನ್ನ ಪಾನಿಪುರಿ ವ್ಯಾಪರದಿಂದಲೇ ಕೋಟಿಕೋಟಿ ಸಂಪಾದಿಸಿದ್ಧಾನೆ. ಸಣ್ಣ ಆಸೆಯೊಂದಿಗೆ ಬದುಕು ಕಟ್ಟಿಕೊಳ್ಳಲು ಪಾನಿಪುರಿ ಅಂಗಡಿ ಶುರುಮಾಡಿದ ಈತನಿಗೆ ಅದೃಷ್ಟ ದೇವತೆಯೇ ಬಾಗಲು ತೆರೆದಿದ್ದಾಳೆ ಎಂದರೆ ತಪ್ಪಾಗಲಿಕ್ಕಿಲ್ಲ.
ಕೇವಲ ಪಾನಿಪುರಿ ವ್ಯಾಪರದಿಂದಲೇ ಕೋಟಿಗಟ್ಟಲೇ ಹಣ ಗಳಿಸುತ್ತಿದ್ದ ವ್ಯಾಪರಿ ತೆರಿಗೆ ಕಟ್ಟದೇ ಐಟಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಸುಮಾರು ದಿನಗಳಿಂದ ತೆರಿಗೆ ಪಾವತಿಸದ ಕಾರಣ ತೆರಿಗೆ ಇಲಾಖೆಯ ಅಧಿಕಾರಿಗಳು ಒಂದು ದಿನ ಈತನ ಪಾನಿಪುರಿ ಅಂಗಡಿಯ ಮೇಲೆ ದಾಳಿ ನಡೆಸಿದ್ಧಾರೆ. ಇಲ್ಲಿ ಸಿಕ್ಕ ಹಣ ಎಷ್ಟು ಗೊತ್ತೇ? ಕೇಳಿದರೆ ದಂಗಾಗಿ ಬಿಡುತ್ತೀರಿ ಮುಂದೆ ನೀವೆ ನೋಡಿ..
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ಚಾಟವಾಲನ ಬಳಿ ಇಷ್ಟು ಕೋಟಿ ಸಿಗತ್ತೇ ಎಂದು ಅಧಿಕಾರಿಗಳು ಕನಸಿನಲ್ಲಿ ಅಂದುಕೊಂಡಿರಲಿಲ್ಲವಂತೆ. ಕೇವಲ ತೆರಿಗೆ ಕಟ್ಟಿಸಲು ಮುಂದಾಗಿದ್ದ ಅಧಿಕಾರಿಗಳಿಗೆ ಪಾನಿಪುರಿ ಅಂಗಡಿಯಲ್ಲಿ ಸಿಕ್ಕಿದ್ದು ಬರೋಬ್ಬರಿ ನೀವು ನಂಬಲಾಗದಷ್ಟು ಕೋಟಿ ರೂಗಳು…
ಅಂಗಡಿ ಮಾಲೀಕ ಎರಡು ವರ್ಷಗಳಿಂದ ತೆರಿಗೆ ಪಾವತಿಸಿರಲಿಲ್ಲ. ಹೀಗಾಗಿ ಪಾನಿಪುರಿ ಅಂಗಡಿ ಮೇಲೆ ದಾಳಿ ನಡೆಸಿದೆವು. ನಂತರ ಶಂಕಿಸಿ ಅಂಗಡಿಯಲ್ಲಿ ಶೋಧಕಾರ್ಯ ನಡೆಸಿದೆವು. ಆದರೆ, ನಮಗೆ ವ್ಯಾಪರಿಯ ಬಳಿ ಸಿಕ್ಕ ಹಣ ಸುಮಾರು 1 ಕೋಟಿ 20 ಲಕ್ಷರೂ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ಹೌದು ನೀವು ಈ ಸುದ್ದಿ ಕೇಳಿ ಆಶ್ಚರ್ಯಪಡಲೇ ಬೇಕು. ಪಟಿಯಾಲದಲ್ಲಿ ಸುಮಾರು ದಿನಗಳಿಂದ ಸಣ್ಣಪುಟ್ಟ ವ್ಯಾಪರಿಗಳು ತೆರಿಗೆ ಪಾವತಿಸಿರಲಿಲ್ಲ. ಹೀಗಾಗಿ ನಾವು ತೆರಿಗೆ ಸಂಗ್ರಹಕ್ಕಾಗಿ ದಾಳಿ ನಡೆಸಿದ್ದೆವು. ಈ ವೇಳೆ ಓರ್ವ ವ್ಯಾಪರಿ ಬಳಿ 1.20 ಕೋಟಿ ಸಿಕ್ಕಿದೆ. ಇನ್ನು ಎಷ್ಟೋ ವ್ಯಾಪರಿಗಳು ತೆರಿಗೆ ಕಟ್ಟದೇ ಕೋಟಿಗಟ್ಟಲೇ ಹಣ ಹೊಂದಿರುವ ಶಂಕೆ ವ್ಯಕ್ತವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
Comments are closed.