ಬೆಂಗಳೂರು: ಕ್ಷುಲಕ ಕಾರಣಕ್ಕೆ ಮೂವರು ಅಪರಿಚಿತ ದುಷ್ಕರ್ಮಿಗಳು ಯುವಕನೊಬ್ಬನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮತ್ತಿಕೆರೆಯ ಎಲ್ಎನ್ ಕಾಲೋನಿಯಲ್ಲಿ ನಡೆದಿದೆ.
ಮತ್ತಿಕೆರೆಯ ನಿವಾಸಿ ಜಗದೀಪ್ ಸಿಂಗ್ (21) ಕೊಲೆಯಾದ ದುರ್ದೈವಿ.
ಏನಿದು ಘಟನೆ?
ಸಿಂಗ್ ತನ್ನ ಸ್ನೇಹಿತ ಸುಹಾಸ್ ಹಾಗೂ ಇಬ್ಬರು ಸ್ನೇಹಿತೆಯರ ಜತೆ ರಾತ್ರಿ ಊಟಕ್ಕೆಂದು ಹೊಟೇಲ್ಗೆ ತೆರಳಿದ್ದ. ಊಟ ಮುಗಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಸಿಂಗ್ನ ಸ್ನೇಹಿತೆಯರನ್ನು ಚುಡಾಯಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಿಂಗ್, ಸಭ್ಯತೆಯಿಂದ ವರ್ತಿಸಿ ಎಂದು ದುಷ್ಕರ್ಮಿಗಳಿಗೆ ಬುದ್ದಿ ಹೇಳಲು ಮುಂದಾಗಿದ್ದಾನೆ. ಈ ವೇಳೆ ನಡೆದ ಮಾತಿನ ಚಕಮಕಿ ತಾರಕಕ್ಕೇರಿದ್ದು, ದುಷ್ಕರ್ಮಿಗಳು ಬಿಯರ್ ಬಾಟಲಿಯಿಂದ ಸಿಂಗ್ ಕತ್ತು ಸೀಳಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.