ಕರಾವಳಿ

ಸಾಂಸ್ಕೃತಿಕ ಚಟುವಟಿಕೆ ಹಾಗೂ ಯಕ್ಷಗಾನ ಕ್ಷೇತ್ರಗಳ ಪೋಷಕ ಬಿಎಸ್ಸೆನ್ನೆಲ್ ನಿವೃತ್ತ ಎಜಿಎಂ ಎಸ್.ಎಂ.ಹೆಗಡೆ ವಿಧಿವಶ

Pinterest LinkedIn Tumblr

ಮಂಗಳೂರು, ಅಕ್ಟೋಬರ್.21: ಬಿ.ಎಸ್.ಎನ್.ಎಲ್‌ನ ನಿವೃತ್ತ ಸಹಾಯಕ ಮಹಾಪ್ರಬಂಧಕ (ಎಜಿಎಂ) ಎಸ್.ಎಂ. ಹೆಗಡೆ (62) ಹೃದಯಾಘಾತದಿಂದ ಹೊನ್ನಾವರದ ಸ್ವಗೃಹದಲ್ಲಿ ಶನಿವಾರ ನಿಧನ ಹೊಂದಿದರು.

ಮೃತರು ಪತ್ನಿ ಟೆಲಿಕಾಂನ ನಿವೃತ್ತ ಉದ್ಯೋಗಿ ಗಿರಿಜಾ ಮತ್ತು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಮೂಲತಃ ಹೊನ್ನಾವರದ ಹಡಿನಬಾಳು ನಿವಾಸಿಯಾಗಿದ್ದ ಅವರು, ಹಲವು ವರ್ಷ ಕಾಲ ಬಿಎಸ್ಸೆನ್ನೆಲ್ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ನಿವೃತ್ತಿಯ ಬಳಿಕವೂ ಸಾಂಸ್ಕೃತಿಕ/ ಯಕ್ಷಗಾನ ಕ್ಷೇತ್ರಗಳಲ್ಲಿ ಪೋಷಕರಾಗಿ ಚಟುವಟಿಕೆಯಿಂದ ಇದ್ದರು. ಮಂಗಳೂರಿನಲ್ಲಿ ಮನೆಯನ್ನು ಹೊಂದಿದ್ದ ಅವರು, ಕೆಲವು ದಿನಗಳ ಹಿಂದೆ ಹೊನ್ನಾವರಕ್ಕೆ ತೆರಳಿದ್ದರು. ಮೃತರು ಪತ್ನಿ, ಮಗ, ಮಗಳು ಹಾಗೂ ಅಪಾರ ಬಂಧು ಸ್ನೇಹಿತ ವರ್ಗದವರನ್ನು‌ ಅಗಲಿದ್ದಾರೆ. ದಿವಂಗತರ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ತನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Comments are closed.