ನವದೆಹಲಿ: ಪೆಟ್ರೋಲ್ ಮೇಲಿನ ಸುಂಕವನ್ನು ಕಡಿತಗೊಳಿಸಲು ದೆಹಲಿ ಸರ್ಕಾರ ಒಪ್ಪದಿರುವ ಹಿನ್ನೆಲೆಯಲ್ಲಿ ದೆಹಲಿಯ ಸಿಎನ್ಜಿ ವಿತರಕರ ಜೊತೆ 400ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಮಾಲೀಕರು ನಾಳೆ ಪ್ರತಿಭಟನೆ ನಡೆಸಲಿದ್ದಾರೆ.
ಪೆಟ್ರೋಲ್ ಬಂಕ್ಗಳ ಮಾಲೀಕರ ಪ್ರತಿಭಟನೆ ಹಿನ್ನೆಲೆಯಲ್ಲಿ ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ದೆಹಲಿ ಪೆಟ್ರೋಲ್ ವಿತರಕರ ಸಂಘ ತಿಳಿಸಿದೆ. ದೆಹಲಿಯಲ್ಲಿ ಸಿಎನ್ಜಿ ಸ್ಟೇಷನ್ ಜೊತೆ ಲಿಂಕ್ ಆಗಿರುವ 400ಕ್ಕೂ ಅಧಿಕ ಪೆಟ್ರೋಲ್ ಬಂಕ್ಗಳಿವೆ. ಅವೆಲ್ಲವೂ ನಾಳೆ ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಮುಚ್ಚಲ್ಪಟ್ಟಿರುತ್ತವೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತತ್ಉ ಡೀಸೆಲ್ ಬೆಲೆಯನ್ನು 2.50 ರೂ. ಕಡಿಮೆಗೊಳಿಸಿತ್ತು. ಹಾಗೇ, ರಾಜ್ಯ ಸರ್ಕಾರ ಕೂಡ 2.50 ರೂ. ಸುಂಕ ಕಡಿತಗೊಳಿಸಿದರೆ ಒಟ್ಟಾರೆ 5 ರೂ. ಬೆಲೆ ಕಡಿಮೆಯಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಸುಂಕ ಕಡಿಮೆ ಮಾಡುವಂತೆ ಮನವಿ ಮಾಡಿತ್ತು. ಆದರೆ, ದೆಹಲಿ ಸರ್ಕಾರ ಇದಕ್ಕೆ ಸ್ಪಂದಿಸದೆ ಸುಂಕವನ್ನು ಯಥಾ ಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಹೀಗಾಗಿ, ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂದು ಪೆಟ್ರೋಲ್ ವಿತರಕರ ಸಂಘದ ಅಧ್ಯಕ್ಷ ನಿಶ್ಚಲ್ ಸಿಂಘಾನಿಯಾ ಹೇಳಿದ್ದಾರೆ.
Comments are closed.