ರಾಷ್ಟ್ರೀಯ

ಶಿಕ್ಷಕನ ಹಲ್ಲೆಗೆ ವಿದ್ಯಾರ್ಥಿ ಸಾವು!

Pinterest LinkedIn Tumblr

ಲಕ್ನೋ: ಶಿಕ್ಷಕನೊಬ್ಬನ ಕ್ರೌರ್ಯಕ್ಕೆ 8 ವರ್ಷದ ವಿದ್ಯಾರ್ಥಿ ಬಲಿಯಾದ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.

ಅರ್ಬಾಜ್ (8) ಮೃತ ದುರ್ದೈವಿ. ಸಾದಿಮಾದಾನ್‍ಪುತ್ ಗ್ರಾಮದ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದ್ದು, ಹಲ್ಲೆ ಮಾಡಿದ ಶಿಕ್ಷಕ ಜೈರಾಜ್ ವಿರುದ್ಧ ಮೃತ ವಿದ್ಯಾರ್ಥಿ ಪೋಷಕರು ದೂರು ನೀಡಿದ್ದಾರೆ.

ಆಗಿದ್ದೇನು?: ಶಿಕ್ಷಕ ಜೈರಾಜ್ ಗುರುವಾರ ಅರ್ಬಾಜ್ ಮೇಲೆ ಹಲ್ಲೆ ಮಾಡಿದ್ದ. ಪರಿಣಾಮ ಅರ್ಬಾಜ್ ಅಸ್ವಸ್ಥಗೊಂಡಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅರ್ಬಾಜ್ ಶುಕ್ರವಾರ ಮೃತಪಟ್ಟಿದ್ದಾನೆ. ಬಳಿಕ ಅರ್ಬಾಜ್ ಪೋಷಕರು ಶಿಕ್ಷಕ ಜೈರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಲ್. ಬಿ.ಕುಮಾರ್ ಪಾಲ್ ತಿಳಿಸಿದ್ದಾರೆ.

ಈ ಕುರಿತು ಎಫ್‍ಐಆರ್ ದಾಖಲಿಸಿಕೊಂಡು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ.

Comments are closed.