ಕರಾವಳಿ

ಕುಂದಾಪುರದ ಗುಜ್ಜಾಡಿಯಲ್ಲಿ ದೋಣಿ ಮುಳುಗಿ ಮೀನುಗಾರ ನಾಪತ್ತೆ

Pinterest LinkedIn Tumblr

ಕುಂದಾಪುರ: ದೋಣಿಯಲ್ಲಿ ತೆರಳಿ ಗಾಳ ಹಾಕಿ ಮೀನುಗಾರಿಕೆಗೆ ತೆರಳಿದ್ದ ವೇಳೆ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಗುಜ್ಜಾಡಿ ಗ್ರಾಮದ ನಾಯಕವಾಡಿ ನಿವಾಸಿ ಡೇವಿಡ್ ಕರ್ವಾಲೋ (43) ನಾಪತ್ತೆಯಾದ ಮೀನುಗಾರ.

ಶುಕ್ರವಾರದಂದು ಗುಜ್ಜಾಡಿಯ ಕಳಿಹಿತ್ಲು ಸಮೀಪದ ಹೊಳೆಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ದೋಣಿ ಮಗುಚಿ ಈ ಘಟನೆ ನಡೆದಿದೆ. ಅಗ್ನಿಶಾಮಕದಳ ಹಾಗೂ ಗಂಗೊಳ್ಳಿ ಪೊಲೀಸರು ನಾಪೆತ್ತಯಾದ ಮೀನುಗಾರ ಡೇವಿಡ್ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.