ಕರಾವಳಿ

ಭಾರ ಎತ್ತುವ ಸ್ಪರ್ಧೆ ; ಮಂಗಳೂರು ವಿವಿಗೆ ಮೂರು ಚಿನ್ನದ ಪದಕ

Pinterest LinkedIn Tumblr

ಮಂಗಳೂರು ಡಿಸೆಂಬರ್ 24 : ಡಿಸೆಂಬರ್ 15 ರಿಂದ 19ರವರೆಗೆ ಚಂಢಿಗರ್ ವಿಶ್ವವಿದ್ಯಾನಿಲಯ, ಮೊಹಾಲಿಯಲ್ಲಿ ಜರಗಿದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ ಎಸ್.ಡಿ.ಎಮ್. ಕಾಲೇಜು, ಉಜಿರೆಯ ವಿದ್ಯಾರ್ಥಿಗಳಾದ ಪುರುಶೋತ್ತಮ್ 61 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ, ಶಿವಪ್ರಕಾಶ್ 81 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ, ಸುಧಾನ್ ಎಮ್. 96 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ, ಆಳ್ವಾಸ್ ಕಾಲೇಜು, ಮೂಡಬಿದ್ರಿಯ ವಿದ್ಯಾರ್ಥಿಗಳಾದ ಕುಶಾಲ್ ಗೌಡ +109 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಹಾಗೂ ವಿರಾಜ್ ದೇಹದಾರ್ಢ್ಯ ಸ್ಪರ್ಧೆಯ 75ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.

ತಂಡದ ತರಬೇತುದಾರರಾಗಿ ರಾಜೇಂದ್ರ ಪ್ರಸಾದ್, ಸಂತೋಷ್ ಹಾಗೂ ತಂಡದ ವ್ಯವಸ್ಥಾಪಕರಾಗಿ ಶಂಕರನಾರಾಯಣ್ ಕಾರ್ಯನಿರ್ವಹಿಸಿರುತ್ತಾರೆ ಎಂದು ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Comments are closed.