ಮಂಗಳೂರು : ಕೊರೋನ ಸೋಂಕಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಉರ್ವಸ್ಟೋರ್ ನ ” ಭುವಿನ ” ದಂತ ಚಿಕಿತ್ಸಾಲಯದ ದಂತ ವೈದ್ಯರಾದ ಡಾ| ಅಶ್ವಥ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಗ್ರಹ ರಕ್ಷಕ ದಳದ ಟ್ರಾಫಿಕ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಹ ರಕ್ಷಕರಿಗೆ N – 95 ಮಾಸ್ಕ್ ಹಾಗು ಇತರ ಗ್ರಹ ರಕ್ಷಕರಿಗೆ 3ಲೇಯರ್ ಮಾಸ್ಕನ್ನು ಉಚಿತವಾಗಿ ವಿತರಿಸಿದರು.
ದ.ಕ ಜಿಲ್ಲಾ ಗ್ರಹ ರಕ್ಷಕ ದಳದ ಕಮಾಂಡೆಂಟ್ ಡಾ| ಮುರಳಿ ಮೋಹನ್ ಚೂಂತಾರು ಉಪಸ್ಥಿತರಿದ್ದರು.
ಜನರಿಗೆ ನಿಕಟವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಹ ರಕ್ಷಕರು ” ಕೊರೋನ ” ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳುವ ಮೂಲಕ ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ಡಾ| ಅಶ್ವಥ್ ಶ್ಲಾಘಿಸಿದರು.
Comments are closed.