ಮಂಗಳೂರು : ಭಾರತ ರತ್ನ ಅಜಾತ ಶತ್ರು ಅತ್ಯುತ್ತಮ ಸಂಸದೀಯ ಪಟು ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೇವಾಕಾರ್ಯ ರೂಪದಲ್ಲಿ ಕೊಡಿಯಾಲ್ ಬೈಲ್ ವಾತ್ಸಲ್ಯಧಾಮ ವೃದ್ಧ ಆಶ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಫಲವಸ್ತು ವಿತರಣಾ ಕಾರ್ಯಕ್ರಮ ನಡೆಯಿತು.
ಈ ವಿತರಣಾ ಕಾರ್ಯಕ್ರಮದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ರೂಪಾ . ಡಿ .ಬಂಗೇರಾ ಸ್ಥಳೀಯ ಮ.ನ.ಪಾ ಸದಸ್ಯರಾದ ಜಯಶ್ರೀ ಕುಡ್ವ ಹಾಗೂ ಮ.ನ.ಪಾ ಸದಸ್ಯರಾದ ಲೀಲಾವತಿ ಪ್ರಕಾಶ್ ಹಾಗೂ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಪೂರ್ಣಿಮಾ ರಾವ್ ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿಗಳಾದ ಹರಿಣಿ ಪ್ರೇಮ್ ನರ್ಮದಾ ರೈ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
Comments are closed.