ಕರಾವಳಿ

ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಉರುಳಿದ ಈಚರ್ ವಾಹನ; ನಾಲ್ವರು ಸಾವು, ಐವರು ಗಂಭೀರ

Pinterest LinkedIn Tumblr

ಉಡುಪಿ: ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ ಸಂಭವಿಸಿ 4 ಮಂದಿ ದಾರುಣ ಸಾವನ್ನಪ್ಪಿದ ಘಟನೆ ಅ.29 ರ ಶುಕ್ರವಾರ ವರದಿಯಾಗಿದೆ.

ಆಗುಂಬೆ ಘಾಟಿಯ ಕಂದಕಕ್ಕೆ ಈಚರ್ ವಾಹನ ಉರುಳಿ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ಈಚರ್ ಚಾಲಕ ಯಜ್ಞೇಶ್, ಕ್ಲೀನರ್ ಶಿವತಿಕೆರೆ ಬಳಿಯ ಮಹಾವೀರಭವನ ಪಕ್ಕದ ನಿವಾಸಿ ಶ್ರೀಜಿತ್ (21) ಜೋಡುಕಟ್ಟೆ ನಿವಾಸಿ ಮಂಜುನಾಥ (35), ಮಣಿ(28) ಎಂದು ಗುರುತಿಸಲಾಗಿದೆ.

ಘಟನೆಯ ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದು, ಮಂಜುನಾಥ ಗೌಡ ಕಾರ್ಕಳ (35), ನಾಗರಾಜ ಸಾಯಬ್ರಕಟ್ಟೆ (30), ಸಯ್ಯದ್ ಆಸೀಫ್ ಕಾರ್ಕಳ (36), ಗಣೇಶ್ ಕಾರ್ಕಳ (21), ಮಹಾದೇವ ಕಾರ್ಕಳ (42) ಎಂದು ಗುರುತಿಸಲಾಗಿದೆ.

ಶಿವಮೊಗ್ಗದಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಕಲ್ಲು ಸಾಗಾಟ ಮಾಡುತ್ತಿದ್ದ ಈಚರ್ ಲಾರಿ ಘಾಟಿ ರಸ್ತೆಯ 5ನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಆಳದ ಪ್ರಪಾತಕ್ಕೆ ಉರುಳಿದೆ.

 

Comments are closed.