ಕರಾವಳಿ

ಕೆರೆಯಲ್ಲಿ ಮುಳುಗಿ ಅಣ್ಣ-ತಂಗಿ ದಾರುಣ ಮೃತ್ಯು: ತಾಯಿಯ ಸ್ಥಿತಿ ಗಂಭೀರ

Pinterest LinkedIn Tumblr

ಕುಂದಾಪುರ: ನೀರಿನ ವ್ಯವಸ್ಥೆಗಾಗಿ ತೋಡಲಾದ ಬಾವಿ ಗಾತ್ರಕ್ಕಿಂತ ದೊಡ್ಡದ ಕೆರೆಯೊಂದರಲ್ಲಿ ಮುಳುಗಿ ಸಹೋದರ-ಸಹೋದರಿ ಮೃತಪಟ್ಟ ಘಟನೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ನಂದ್ರೊಳಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಧನರಾಜ್(13), ಛಾಯಾ (7) ಮೃತಪಟ್ಟಿದ್ದು
ಈರ್ವರು ಮಕ್ಕಳನ್ನು ರಕ್ಷಿಸಲು ಹೋಗಿದ್ದ ತಾಯಿ ಶೀಲಾ ಮಡಿವಾಳ ಇವರು ನೀರಲ್ಲಿ ಮುಳುಗಿ ಹೋಗಿದ್ದು ಅವರನ್ನು ರಕ್ಷಣೆ ಮಾಡಲಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಇಬ್ಬರು ಮಕ್ಕಳು ವಂಡ್ಸೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದರು ಎನ್ನಲಾಗಿದೆ. ಶೀಲಾ ಅವರ ಪತಿ ಸತೀಶ್ ಮಡಿವಾಳ ವಿಜಯಪುರದಲ್ಲಿ ಹೋಟೆಲ್ ಕಾರ್ಮಿಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಮನೆ ಹತ್ತಿರದ ಗದ್ದೆಯಲ್ಲಿದ್ದ ಕೆರೆಯಲ್ಲಿ ಛಾಯಾ ಕಾಲು ಜಾರಿ ಬಿದ್ದಾಗ ರಕ್ಷಿಸಲು ಅಣ್ಣ ಧನರಾಜ್ ಹೋಗಿದ್ದು ಇಬ್ಬರೂ ನೀರಲ್ಲಿ ಮುಳುಗಿದ್ದಾರೆ. ಆ ಬಳಿಕ ತಾಯಿ ಮಕ್ಕಳ ರಕ್ಷಣೆಗೆಂದು ಹೋದಾಗ ಸ್ಥಳೀಯರು ಶೀಲಾ ಅವರನ್ನು ರಕ್ಷಿಸಿದ್ದಾರೆ.

ಕೊಲ್ಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 

Comments are closed.