ರಾಷ್ಟ್ರೀಯ

ಸರ್ಕಾರಕ್ಕೆ ಸಂದೇಶ ತಲುಪಿಸುವ ವ್ಯಕ್ತಿ ನಾನಲ್ಲ: ಮೋಹನ ಭಾಗವತ್‌

Pinterest LinkedIn Tumblr

rssಆಗ್ರಾ (ಪಿಟಿಐ): ‘ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸಂದೇಶಗಳನ್ನು ತಲುಪಿಸುವ ವ್ಯಕ್ತಿ ನಾನಲ್ಲ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹೇಳಿದರು. ಸಮಾರಂಭವೊಂದರಲ್ಲಿ 2000 ಯುವ ಜೋಡಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಕೇಳಿಕೊಂಡ ಶಿಕ್ಷಕರಿಗೆ, ‘ನಾನು ಎನ್‌ಡಿಎ ಸರ್ಕಾರದ ಸಂದೇಶಗಳನ್ನು ತಲುಪಿಸುವ ವ್ಯಕ್ತಿಯಲ್ಲ. ನಿಮ್ಮ ಸಮಸ್ಯೆಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ಪ್ರಕಾಶ ಜಾವಡೇಕರ್‌ ಅವರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು’ ಎಂದರು.

ಶಿಕ್ಷಕರ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆ. ಆದರೆ ತಾವು ಎನ್‌ಡಿಎ ಸರ್ಕಾರದ ಪ್ರತಿನಿಧಿ ಅಲ್ಲ ಎಂದರು. ಶಿಕ್ಷಕರು ಅನೇಕ ಸಮಸ್ಯೆಗಳನ್ನು ಭಾಗವತ್‌ ಅವರಲ್ಲಿ ಹೇಳಿಕೊಂಡರು. ಅದಕ್ಕೆ ಅವರು ಆರ್‌ಆರ್‌ಎಸ್‌ ಸ್ವತಂತ್ರ ಸಂಘಟನೆ. ಶಿಕ್ಷಕರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಹೇಳಿದರು.

Comments are closed.