ರಾಷ್ಟ್ರೀಯ

ಈ ಯುವಕನನ್ನು ಬಲಿ ತೆಗೆದುಕೊಂಡ ಇಯರ್‌ಫೋನ್‌ !

Pinterest LinkedIn Tumblr

ಚೆನ್ನೈ: ಕಿವಿಯಲ್ಲಿ ಹೆಡ್‌ಫೋನ್‌ ಹಾಕಿ ಹಾಡು ಕೇಳುವವರು ಎಚ್ಚರ. ಜಮ್ಮು ಮತ್ತು ಕಾಶ್ಮೀರದಲ್ಲಿ ಚೆನ್ನೈ ಹುಡುಗನೊಬ್ಬ ಇಯರ್‌ ಫೋನ್‌ ಇಲ್ಲದಿದ್ದರೆ ಬದುಕುಳಿಯುತ್ತಿದ್ದ!

ಬಸ್‌ನಲ್ಲಿ ತೆರಳುತ್ತಿದ್ದ ವೇಳೆ ಬಲಭಾಗದಿಂದ ಕಲ್ಲುಬಂಡೆ ಉರುಳಿ ಬಿದ್ದ ಪರಿಣಾಮ ಚೆನ್ನೈನ ತಿರುಮಣಿ ಸೆಲ್ವನ್‌(24)ಸಾವನ್ನಪ್ಪಿದ್ದಾನೆ. ಇಯರ್‌ಫೋನ್‌ನಲ್ಲಿ ಹಾಡು ಕೇಳುತ್ತಿದ್ದ ಸೆಲ್ವನ್‌ಗೆ ಹೊರಗಿನ ಕೂಗಾಟಗಳು ಕೇಳಿಯೇ ಇಲ್ಲ. ಬಸ್‌ನಲ್ಲಿ ಸ್ವಲ್ಪ ಮುಂದೆ ಕುಳಿತಿದ್ದ ತಂದೆಯೇ ಕಲ್ಲು ಬಂಡೆ ಬೀಳುತ್ತಿರುವ ಬಗ್ಗೆ ಬೊಬ್ಬೆ ಹೊಡೆದರೂ, ಇಯರ್‌ಫೋನ್‌ ಶಬ್ಧಕ್ಕೆ ಏನೂ ಕೇಳಿಲ್ಲ. ಸೆಲ್ವನ್‌ ತಂದೆ ಏನೋ ಹೇಳುತ್ತಿದ್ದಾರೆ ಎಂದು ಇಯರ್‌ಫೋನ್‌ ತೆಗೆಯುವಷ್ಟರಲ್ಲಿ, ತಲೆಯ ಭಾಗಗಕ್ಕೆ ಕಲ್ಲು ಅಪ್ಪಳಿಸಿ, ಸೆಲ್ವನ್‌ ಪ್ರಜ್ಞೆ ತಪ್ಪಿದ್ದಾನೆ. ತಕ್ಷಣ ತಿರುಮಣಿ ಸಲ್ವನ್‌ನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಜೀವ ಉಳಿಸಲು ಸಾಧ್ಯವಾಗಿಲ್ಲ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಜಮ್ಮು ಕಾಶ್ಮೀರದ ಭಾಗಕ್ಕೆ ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದ ಸೆಲ್ವನ್‌, ಹೆಚ್ಚು ಶಬ್ದದೊಂದಿಗೆ ಇಯರ್‌ಫೋನ್‌ನಲ್ಲಿ ಹಾಡು ಕೇಳಿದ್ದರಿಂದ ಮೃತಪಟ್ಟಂತಾಗಿದೆ. ನಾವೆಲ್ಲರೂ ಬಸ್‌ನಲ್ಲಿ ಹೋಗುತ್ತಿದ್ದೆವು. ಅಚಾನಕ್‌ ಆಗಿ ಕಲ್ಲು ಬಂಡೆಗಳು ಬಸ್‌ಗೆ ಅಪ್ಪಳಿಸಲು ಶುರುವಾದವು. ಕೂಡಲೇ ನಾವೆಲ್ಲ ಬಸ್‌ನ ಸೀಟಿನಿಂದ ಕೆಳಗೆ ಕುಳಿತು ರಕ್ಷಣೆ ಪಡೆದೆವು. ಮಗನಲ್ಲೂ ರಕ್ಷಣೆ ತೆಗೆದುಕೊಳ್ಳುವಂತೆ ಬೊಬ್ಬೆ ಹಾಕಿದೆ. ಕಿವಿಗೆ ಇಯರ್‌ಫೋನ್‌ ಹಾಕಿದ್ದರಿಂದ ಅವನಿಗೆ ನನ್ನ ಮಾತು ಕೇಳಿಸಿಲ್ಲ ಎಂದು ತಂದೆ ಹೇಳಿಕೆ ನೀಡಿದ್ದಾರೆ.

Comments are closed.