ರಾಷ್ಟ್ರೀಯ

ರಾಜ್ಯ ಮತದಾರರನ್ನು ಸೆಳೆಯಲು ನೇಪಾಳದ ಪಶುಪತಿನಾಥ ದೇವಸ್ಥಾನ-ಮುಕ್ತಿ ನಾರಾಯಣ ದೇವಾಯಕ್ಕೆ ಮೋದಿ ಭೇಟಿ

Pinterest LinkedIn Tumblr


ಹೊಸದಿಲ್ಲಿ: ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಕರ್ನಾಟಕದ ಮತದಾರರನ್ನು ಸೆಳೆಯಲು ಅಲ್ಲಿನ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಅಶೋಕ್‌ ಗೆಹ್ಲೋಟ್‌ ಆರೋಪಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ವೇಳೆ ಕಾಠ್ಮುಂಡುವಿನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವಕ್ಕೆ ಅಗೌರವ ಸಲ್ಲಿಸಿದಂತೆ. ಪ್ರಧಾನಿ ಮೋದಿ ತನ್ನ ಪ್ರವಾಸಕ್ಕೆ ಕರ್ನಾಟಕ ಚುನಾವಣೆಯ ದಿನವನ್ನೇ ನಿಗದಿ ಮಾಡಿರುವ ಉದ್ಧೇಶ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದ್ದು, ಅಶೋಕ್‌ ಗೆಹ್ಲೋಟ್‌ ಟೀಕೆಗೆ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಕರ್ನಾಟಕದ ಸಮಸ್ತ ನಾಗರಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕೋರಿದ್ದರು. ಶುಕ್ರವಾರ ಕಾಠ್ಮಂಡುವಿನ ಪಶುಪತಿನಾಥ ದೇವಸ್ಥಾನ ಹಾಗೂ ಮುಕ್ತಿ ನಾರಾಯಣ ದೇವಾಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲದೆ ಜಾನಕಪುರದ ಜಾನಕಿ ದೇವಲಾಯದಲ್ಲಿ ಶೋಡಷೋಪಚಾರ ಪೂಜೆ ನೆರವೇರಿಸಿದ್ದರು. ಈ ಎಲ್ಲ ಬೆಳವಣಿಗೆಯನ್ನು ಅಶೋಕ್‌ ಗೆಹ್ಲೋಟ್‌ ಟೀಕಿಸಿದ್ದಾರೆ.

Comments are closed.