ರಾಷ್ಟ್ರೀಯ

ವ್ಯಕ್ತಿಯೊಬ್ಬನಿಂದ ಕುಡಿದ ಮತ್ತಿನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಫೇಸ್‌ಬುಕ್‌ನಲ್ಲಿ ಕೊಲೆ ಬೆದರಿಕೆ

Pinterest LinkedIn Tumblr


ತಿರುವನಂತಪುರಂ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ.

ದುಬೈನಲ್ಲಿ ಕೆಲಸದಲ್ಲಿರುವ ಕೃಷ್ಣ ಕುಮಾರನ್‌ ನಾಯರ್‌, ಸಾಮಾಜಿಕ ಜಾಲತಾಣಗಳಲ್ಲಿ ವಿಜಯನ್‌ ಹಾಗೂ ಅವರ ಕುಟುಂಬವನ್ನು ನೀಚ ಶಬ್ಧಗಳಿಂದ ನಿಂದನೆ ಮಾಡಿರುವ ವೀಡಿಯೋವನ್ನು ಹರಿಬಿಟ್ಟಿದ್ದಾರೆ. ಕುಡಿದ ನಶೆ ಇಳಿದ ಕೂಡಲೇ ಕ್ಷಮೆ ಕೋರಿರುವ ಅವರು, ಮತ್ತೊಂದು ವೀಡಿಯೋ ಅಪ್‌ಲೋಡ್‌ ಮಾಡಿದ್ದು, ಮೊದಲು ಅಪ್‌ಲೋಡ್‌ ಮಾಡಿದ್ದ ಬೆದರಿಕೆ ವೀಡಿಯೋವನ್ನು ಡಿಲೀಟ್‌ ಮಾಡಿದ್ದಾರೆ.

ತಾನೊಬ್ಬ ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿದ್ದು, ವಿಜಯನ್‌ ಅವರನ್ನು ಮುಗಿಸಲು ಎಲ್ಲ ಸಿದ್ಧತೆ ಮಾಡಲಾಗಿದೆ. ಯುವ ಮೋರ್ಚಾ ನಾಯಕಿ ಲಸಿತಾ ಪಾಲಕ್ಕಲ್‌ನ ವಿರುದ್ಧ ದಾಖಲಾಗಿರುವ ಪ್ರಕರಣ ನಾಯರ್‌ ಅವರನ್ನು ಈ ರೀತಿ ವೀಡಿಯೋ ಮಾಡಲು ಪ್ರೇರೇಪಿಸಿದ್ದು, ವಿಜಯನ್‌ ಅವರನ್ನು ಕೊಲೆ ಮಾಡಲೆಂದೇ ಕೇರಳಕ್ಕೆ ಬರುತ್ತೇನೆ. ಆಯುಧಗಳು ಸಿದ್ಧವಾಗಿದೆ. ಆರ್‌ಎಸ್‌ಎಸ್‌ ಸ್ವಯಂ ಸೇವಕರು ವಿಜಯನ್‌ ವಿರುದ್ಧ ಸಾರಿರುವ ಸಮರಕ್ಕೆ ಕೈಜೋಡಿಸುವಂತೆಯೂ ಕೋರಿದ್ದರು.

ಕ್ಷಮೆ ಕೇಳಿದ ನಾಯರ್‌

ಸಾಮಾಜಿಕ ತಾಣಗಳಲ್ಲಿ ವೀಡಿಯೋ ಹರಿದಾಡುತ್ತಿರುವ ಬಗ್ಗೆ ಸ್ನೇಹಿತ ತಿಳಿಸಿದ್ದು, ಕೂಡಲೇ ಕ್ಷಮೆ ಕೋರಿರುವ ವೀಡಿಯೋ ಮಾಡಿ, ಬೆದರಿಕೆ ವೀಡಿಯೋವನ್ನು ತೆಗೆದು ಹಾಕಿದ್ದಾರೆ. ಅಲ್ಲದೆ ವಿಜಯನ್‌ ನೇತೃತ್ವದ ಸರಕಾರ ಕೇರಳಕ್ಕೆ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದ್ದು, ಅಭಿವೃದ್ಧಿಯತ್ತ ಹೆಜ್ಜೆ ಹಾಕಿದೆ ಎಂದಿದ್ದಾರೆ.

Comments are closed.