ರಾಷ್ಟ್ರೀಯ

ತಾಳಿ ಕಟ್ಟುವ ಮುನ್ನವೇ ಮುಂಬೈ ಗ್ಯಾಂಗ್‌ಸ್ಟರ್ ಬಂಧನ!

Pinterest LinkedIn Tumblr


ಇಂದೋರ್: ಮದುವೆ ಮೂಡ್‌ನಲ್ಲಿದ್ದ ಬೋರಿವಿಲಿ ಮೂಲದ ಗ್ಯಾಂಗ್‌ಸ್ಟರ್ ಮಂದರ್ ಬೋರ್ಕರ್ ಎಂಬಾತನನ್ನು ತಾಳಿ ಕಟ್ಟುವ ಕೆಲವು ನಿಮಿಷಗಳ ಮುನ್ನವೇ ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

ಭೂಗತ ಪಾತಕಿ ಛೋಟಾ ರಾಜನ್ ಗ್ಯಾಂಗ್‌ ಜತೆ ಸಂಪರ್ಕ ಹೊಂದಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಈತನನ್ನು ಉಜ್ಜಯಿನಿಯ ಮಹಾಕಾಳಿ ದೇವಾಲಯದಿಂದಲೇ ಬಂಧಿಸಲಾಗಿದೆ ಎಂದು ಮಹಾಕಾಲ್ ಪೊಲೀಸ್ ಠಾಣೆಯ ಉಸ್ತುವಾರಿ ಎಂ.ಎಸ್. ಪರ್ಮಾರ್ ಅವರು ಸುದ್ದಿಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿ ವಿರುದ್ಧ ಮುಂಬಯಿ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಿದ್ದು, ಈ ಹಿಂದೆ ಕೊಲೆ ಮತ್ತು ಸುಲಿಗೆ ಪ್ರಕರಣದಲ್ಲಿ ಈತ ಜೈಲುಪಾಲಾಗಿದ್ದ ಎಂದು ಅವರು ತಿಳಿಸಿದ್ದಾರೆ.

ಗ್ಯಾಂಗ್‌ಸ್ಟರ್ ಗುರು ಸತಂ ಜತೆ ಕೈಜೋಡಿಸಿದ್ದ ಮಾಜಿ ಡಾನ್ ನಂದು ಕದಂ ಪುತ್ರ ರಾಜಾ ಕದಂ ಹಾಗೂ ಮಂದರ್, ಬಿಲ್ಡರ್‌ಗಳಿಗೆ ಬೆದರಿಕೆ ಹಾಕಿ ಸುಲಿಗೆ ಮಾಡುವ ಮೂಲಕ ಸುದ್ದಿಯಲ್ಲಿದ್ದರು.

ಬೆದರಿಕೆ ಪ್ರಕರಣ ಸಂಬಂಧ ರಾಜಾ ಕದಂ ಬಂಧನಕೊಳ್ಳಗಾದರೆ, ಮಂದರ್ ತಲೆ ಮರೆಸಿಕೊಂಡಿದ್ದ. ಬಳಿಕ ಈತನೇ ಮುಂಬಯಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳಿಗೆ ಶರಣಾಗಿದ್ದ. ಆದರೆ, ಸಾಕ್ಷ್ಯಧಾರ ಕೊರತೆಯಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಹಳೇ ವರಸೆ ಮುಂದುವರಿಸಿದ್ದ ಎಂದು ತಿಳಿದುಬಂದಿದೆ.

Comments are closed.