ರಾಷ್ಟ್ರೀಯ

ಮೋದಿಯನ್ನು ತಬ್ಬಿಕೊಂಡ ರಾಹುಲ್; ಪ್ರಧಾನಿಯವರು ವೈದ್ಯರ ಬಳಿ ದೇಹ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು : ಸ್ವಾಮಿ

Pinterest LinkedIn Tumblr

ನವದೆಹಲಿ: ಅವಿಶ್ವಾಸ ಗೊತ್ತುವಳಿ ಮಂಡನೆ ಚರ್ಚೆ ವೇಳೆ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ತಬ್ಬಿಕೊಂಡಿದ್ದನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಕೂಡಲೇ ಮೋದಿ ವೈದ್ಯರ ಬಳಿ ತನ್ನ ದೇಹ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ಸ್ವಾಮಿ ಕುಹುಕವಾಡಿದ್ದಾರೆ.

ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿಗೆ ತಮ್ಮನ್ನು ಆಲಿಂಗಿಸಲು ಅವಕಾಶವನ್ನೇ ನೀಡಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. .

ರಾಹುಲ್ ಗಾಂಧಿಯನ್ನು ಬುದ್ದು ಎಂದು ಕರೆದಿರುವ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ತಮ್ಮನ್ನು ಆಲಿಂಗಿಸಲು ರಾಹುಲ್ ಗೆ ಅವಕಾಶ ನೀಡಬಾರದಿತ್ತು ಎಂದು ಟ್ವೀಟ್ ಮಾಡಿದ್ದಾರೆ, ಇಂಥಹ ಘಟನೆಗಳು ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ನಡೆಯಬಾರದು ಎಂದು ಹೇಳಿದ್ದಾರೆ.

Comments are closed.