ಚಂಡೀಗಢ: ವಿಚ್ಛೇದನದ ಕೇಸ್ವೊಂದು ಕೋರ್ಟ್ನಲ್ಲಿ ಜುಲೈ 27ಕ್ಕೆ ಮುಂದೂಡಿಕೆಯಾಗಿದೆ. ಇದರಲ್ಲೇನು ವಿಶೇಷ ಅಂತೀರಾ ? ಇದಕ್ಕೆ ಕಾರಣ ತನ್ನ ಮಾಜಿ ಪತ್ನಿಗೆ ಪತಿ ಕೊಟ್ಟಿರುವ ಜೀವನಾಂಶ.
ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಆದೇಶದಂತೆ ಪತಿ ತನ್ನ ಮಾಜಿ ಪತ್ನಿಗೆ ಒಂದು ತಿಂಗಳ ಜೀವನಾಂಶದ ಮೊತ್ತವನ್ನು ನೀಡಿದ್ದಾನೆ. ಆದರೆ, 24,600 ರೂ.ಯನ್ನು ಒಂದು ಹಾಗೂ ಎರಡು ರೂ. ಕಾಯಿನ್ಗಳ ಮೌಲ್ಯದಲ್ಲಿ ನೀಡಿರುವುದಕ್ಕೆ ಆತನ ಮಾಜಿ ಪತ್ನಿ ಹೌಹಾರಿದ್ದಾಳೆ. ಇದರಿಂದ ಹರಿಯಾಣದ ಜಿಲ್ಲಾ ನ್ಯಾಯಾಲಯದಲ್ಲಿ ಡ್ರಾಮಾ ನಡೆದಿದ್ದು, ಕಲಾಪವನ್ನು ಎರಡು ದಿನಗಳ ಕಾಲ ಮುಂದೂಡುವಂತೆ ಮಾಡಿದೆ. ಇದಕ್ಕೆ ಆಕ್ರೋಶಗೊಂಡಿರುವ ಮಹಿಳೆ, ನನಗೆ ಟಾರ್ಚರ್ ಕೊಡಲು ತನ್ನ ಮಾಜಿ ಪತಿ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ಇದು ಕಾನೂನಿನ ದುರ್ಬಳಕೆ ಎಂದು ಸಹ ಮಹಿಳೆ ಹೇಳಿದ್ದಾಳೆ.
ಸಾವಿರಾರು ಕಾಯಿನ್ಗಳು
2015ರಲ್ಲಿ ಪತಿ ಹಾಗೂ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ, ಮಾಜಿ ಪತ್ನಿಗೆ ಜೀವನಾಂಶಕ್ಕಾಗಿ ತಿಂಗಳಿಗೆ 25,000 ರೂ. ನೀಡುವಂತೆ ಕೋರ್ಟ್ ಪತಿಗೆ ನಿರ್ದೇಶಿಸಿತ್ತು. ಇದನ್ನು ನೀಡಲು ಪತಿ ಒಪ್ಪದ ಕಾರಣ, ಮಾಜಿ ಪತ್ನಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಕೆಳಗಿನ ನ್ಯಾಯಾಲಯವನ್ನು ಪುರಸ್ಕರಿಸಿದ್ದ ಹೈಕೋರ್ಟ್, ಕಳೆದ ಎರಡು ತಿಂಗಳಿಂದ ಜೀವನಾಂಶವನ್ನು ಆಕೆಗೆ ನೀಡದ ಹಿನ್ನೆಲೆ 50 ಸಾವಿರ ರೂ.ಯನ್ನು ನೀಡಲು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನಿರ್ದೇಶಿಸಿತ್ತು. ನಂತರ, ಹೈಕೋರ್ಟ್ ವಕೀಲ ಒಂದು ತಿಂಗಳ ಜೀವನಾಂಶದ ಮೊತ್ತವನ್ನು ಜಿಲ್ಲಾ ನ್ಯಾಯಾಲಯದಲ್ಲಿ ನೀಡಿದ್ದರು. ಇದರಲ್ಲಿ 24,600 ರೂ. ಮೊತ್ತದಷ್ಟು ಕಾಯಿನ್ಗಳನ್ನು ತುಂಬಿದ ಬ್ಯಾಗ್ ಇದ್ದದ್ದನ್ನು ನೋಡಿ ಮಹಿಳೆ ಆಕ್ರೋಶಗೊಂಡಿದ್ದಾಳೆ.
ಎಣಿಕೆ ಕಾರ್ಯ
ಇನ್ನು, ತನ್ನ ಮಾಜಿ ಪತಿಯ ಬಳಿ ಹಣವಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಅವರು ಲಾಯರ್ ಆಗಿದ್ದು, ಉನ್ನತ ಸ್ಥಾನಮಾನದಲ್ಲಿರುವ ವ್ಯಕ್ತಿಗಳು ಅವರ ಗ್ರಾಹಕರಾಗಿದ್ದಾರೆ. ನನಗೆ ಹಣದ ಅವಶ್ಯಕತೆ ತುಂಬಾ ಇದೆ. ಆದರೆ, ತನ್ನ ಪತಿ ಹಲವು ಬಾರಿ ಕೋರ್ಟ್ ಕಲಾಪಗಳನ್ನು ಮುಂದೂಡಿದ ಬಳಿಕ ಹಣ ನೀಡಲು ಒಪ್ಪಿಕೊಂಡಿದ್ದರು. ಈಗ ಕಾಯಿನ್ಗಳ ರೂಪದಲ್ಲಿ ನೀಡಿದ್ದು, ಇದನ್ನು ಬ್ಯಾಂಕ್ಗಳು ಸಹ ಪಡೆದುಕೊಳ್ಳುವುದಿಲ್ಲ. ಈ ದುಡ್ಡನ್ನು ಇಟ್ಟುಕೊಂಡು ತಾನು ಏನು ಮಾಡಲಿ ಎಂದು ಮಹಿಳೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪತ್ನಿಗೆ ಜೀವನಾಂಶವೆಂದು ಚಿಲ್ಲರೆ ಕೊಟ್ಟ ಪತಿ; ಹಣ ಎಣಿಸಲಾಗದೆ ಕೇಸ್ ಮುಂದೂಡಿದ ಜಜ್
ಆದರೆ, ತನ್ನನ್ನು ತಾನು ಸಮರ್ಥಿಸಿಕೊಂಡಿರುವ ಪತಿ, ದುಡ್ಡನ್ನು 100, 500 ಹಾಗೂ 2000 ರೂ.ಗಳ ನೋಟುಗಳಲ್ಲೇ ಕೊಡಬೇಕೆಂದು ಎಲ್ಲೂ ಬರೆದಿಲ್ಲ. ಜತೆಗೆ, ನಾನು ನನ್ನ ಜೂನಿಯರ್ಗಳಿಗೆ ಹಣವನ್ನು ಎಣಿಸಲು ಕಳಿಸಿದ್ದೆ ಎಂದು ಆತ ಹೇಳಿದ್ದಾರೆ. ಆದರೆ, 400 ರೂ.ಯನ್ನು ಮಾತ್ರ 100 ರೂ. ನೋಟುಗಳಲ್ಲಿ ನೀಡಿರುವುದು ಮತ್ತೊಂದು ವಿಚಿತ್ರ ಎನಿಸಿದೆ. ಇನ್ನು, ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ಈ ಡ್ರಾಮಾ ನಡೆದಿದ್ದು, ಈ ಹಿನ್ನೆಲೆ ಹಣವನ್ನು ಎಣಿಸಲೆಂದು ನ್ಯಾಯಾಧೀಶ ರಜನೀಶ್ ಕೆ ಶರ್ಮಾ ಪ್ರಕರಣವನ್ನು ಮುಂದೂಡಿದ್ದಾರೆ.
Comments are closed.