ರಾಷ್ಟ್ರೀಯ

ತನ್ನ ಜತೆಗೆ ಮದುವೆಗೆ ಒಪ್ಪದ ಯುವತಿಯ ಕೊಂದು ಪೊಲೀಸರಿಗೆ ಶರಣು

Pinterest LinkedIn Tumblr


ನಾಶಿಕ್‌, ಮಹಾರಾಷ್ಟ್ರ : ತನ್ನ ಜತೆಗೆ ಮದುವೆಗೆ ನಿರಾಕರಿಸಿದ 21ರ ಹರೆಯದ ತರುಣಿಯನ್ನು ಇರಿದು ಕೊಂದ 28ರ ಹರೆಯದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ತರುಣಿಯನ್ನು ಇರಿದು ಕೊಂದ ನಿಫಾಡ ತಾಲೂಕಿನ ಕಸ್ಬಾ ಸುಕೇಣೆ ಗ್ರಾಮದ ನಿವಾಸಿಯಾಗಿರುವ ಸೂರಜ್‌ ಚವಾಣ್‌ ಪೊಲೀಸರಿಗೆ ಶರಣಾದ. ಈತ ಹಿಂದೆಯೂ ಅನೇಕ ಬಾರಿ ತನ್ನನ್ನು ಮದುವೆಯಾಗುವಂತೆ ತರುಣಿಯನ್ನು ಪೀಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸೂರಜ್‌ ಚವಾಣ್‌ ಇರಿತದಿಂದ ಬೆನ್ನು, ಕುತ್ತಿಗೆಗೆ ಗಂಭೀರವಾಗಿ ಗಾಯಗೊಂಡ ತರುಣಿಯು ಸ್ಥಳದಲ್ಲೇ ಮೃತಪಟ್ಟಳು. ಈಕೆಯನ್ನು ರಕ್ಷಿಸಲು ಮುಂದಾದ ಈಕೆಯ ತಂದೆಗೆ ಚೂರಿ ಇರಿತಗಳಾಗಿದ್ದು ಅವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂರಜ್‌ನನ್ನು ಬಂಧಿಸಿರುವ ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.