ರಾಷ್ಟ್ರೀಯ

ನಾನು ಪ್ರಧಾನಿ ಆಗಲು ನೆರವಾಗಿದ್ದು ಕರುಣಾನಿಧಿ: ದೇವೇಗೌಡ

Pinterest LinkedIn Tumblr


ಚೆನ್ನೈ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ಮುಖಂಡ, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿಯವರನ್ನು ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರು ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ನಂತರ ಕರುಣಾನಿಧಿ ಪುತ್ರ ಎಂ.ಕೆ. ಸ್ಟಾಲಿನ್‌ ಮತ್ತು ಪುತ್ರಿ ಕನಿಮೋಳಿ ಜತೆ ದೇವೇಗೌಡರು ಮಾತುಕತೆ ನಡೆಸಿದರು.

ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 1996ರಲ್ಲಿ ತಾವು ಪ್ರಧಾನಿಯಾಗಲು ಕರುಣಾನಿಧಿ ಅವರ ಪಾತ್ರವಿತ್ತು ಎಂದು ಸ್ಮರಿಸಿದರು.

ನಾನು ಪ್ರಧಾನಿಯಾಗಲು ಕರುಣಾನಿಧಿ ಸಹ ಕಾರಣ. ಅದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಐದು ಅವಧಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರ ಸೇವೆಯನ್ನು ಮಾಜಿ ಪ್ರಧಾನಿ ಶ್ಲಾಘಿಸಿದರು.

Comments are closed.