ರಾಷ್ಟ್ರೀಯ

ಹಿಂದಿ ದಿನಪತ್ರಿಕೆ ‘ಪೀತಪತ್ರಿಕೆ’ಯ ಮುಖ್ಯ ಸಂಪಾದಕನ ಮೇಲೆ ಗುಂಡಿನ ದಾಳಿ

Pinterest LinkedIn Tumblr


ಭೋಪಾಲ್: ಹಿಂದಿ ದಿನಪತ್ರಿಕೆಯ ಮುಖ್ಯಸಂಪಾದಕರೊಬ್ಬರ ಮೇಲೆ ಸೋಮವಾರ ರಾತ್ರಿ ಗುಂಡಿನ ದಾಳಿ ನಡೆಸಲಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನ ಬೋಧಪುರ ಪ್ರದೇಶದ ಬಳಿ ಈ ದುಷ್ಕೃತ್ಯ ನಡೆದಿದ್ದು ಸಂತ್ರಸ್ತರನ್ನು ಸಂಜಯ್ ಗುಪ್ತಾ (48) ಎಂದು ಗುರುತಿಸಲಾಗಿದೆ.

ಇವರು ಹೋಟೆಲ್ ಮತ್ತು ಇತರ ವ್ಯವಹಾರಗಳಲ್ಲಿ ಸಹ ತೊಡಗಿದ್ದು ಅದರ ಜತೆಗೆ ಪೀತಪತ್ರಿಕೆಯೊಂದನ್ನು ನಡೆಸುತ್ತಿದ್ದಾರೆ.

ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಸಂಜಯ್ ಅವರ ಬೆನ್ನ ಹಿಂದಿನಿಂದ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಲೆಟ್ ಕಿಬ್ಬೊಟ್ಟೆಗೆ ಹೊಕ್ಕಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಅವರನ್ನುಳಿಸುವ ಪ್ರಯತ್ನಗಳು ಮುಂದುವರೆದಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಹಳೆಯ ದ್ವೇಷವೇ ಹತ್ಯೆ ದಾಳಿಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಅವರ ಬಳಿ ಇದ್ದ ಬ್ಯಾಗನ್ನು ಸಹ ಹೊತ್ತೊಯ್ಯಲಾಗಿದ್ದು, ಅದರಲ್ಲಿ ಹಣವಿದ್ದಿರಬಹುದೆಂದು ಹೇಳಲಾಗುತ್ತಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.