ರಾಷ್ಟ್ರೀಯ

ಅಪಘಾತದಲ್ಲಿ ಮೃತಪಟ್ಟ ಯುವಕನ ಅಂಗಾಂದ ದಾನ ಮಾಡಿ ಮೂವರಿಗೆ ಮರು ಜನ್ಮ ನೀಡಿದ ಪೋಷಕರು!

Pinterest LinkedIn Tumblr


ಪಾಟ್ನಾ: ಅಪಘಾತದಲ್ಲಿ ಸಾವನ್ನಪ್ಪಿದ್ದ 19 ವರ್ಷದ ಯುವಕನ ದೇಹದ ಅಂಗಾಂಗಳನ್ನು ದಾನ ಮಾಡುವ ಮೂಲಕ ಪೋಷಕರು ಮೂವರು ವ್ಯಕ್ತಿಗಳಿಗೆ ಮರುಜನ್ಮವನ್ನು ನೀಡಿದ್ದಾರೆ.

ಬಿಹಾರದ ನಳಂದ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿ ಯುವಕ ಮೃತಪಟ್ಟಿದ್ದ. ಮೃತಪಟ್ಟ ಯುವಕನ ತಂದೆ ಎಸ್ ಭೂಷಣ್ ಪ್ರಸಾದ್ ಅವರು ಪಾಟ್ನಾದಲ್ಲಿರುವ ಇಂದಿರಾ ಗಾಂಧಿ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗೆ ಮಗನ ಅಂಗಾಂಗಳನ್ನು ದಾನ ಮಾಡಿದ್ದಾರೆ. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಮಗನ ಹೃದಯ, ಕಣ್ಣುಗಳು ಮತ್ತು ಲಿವರ್(ಯಕೃತ್ತು) ಬೇರೆ ವ್ಯಕ್ತಿಗಳ ಜೀವನಕ್ಕೆ ಆಸರೆಯಾಗುತ್ತದೆ ಎಂದು ದಾನ ಮಾಡಲು ನಿರ್ಧರಿಸಿದೆವು ಎಂದು ಹೇಳಿದ್ದಾರೆ.

ಮೃತ ಪಟ್ಟ ಯುವಕನ ತಾಯಿ ಮಗನ ದೇಹವನ್ನು ದಾನ ಮಾಡಲು ಒಪ್ಪಿಕೊಂಡಿದ್ದು, ಆಕೆಯ ತೀರ್ಮಾನ ಇತರರಿಗೆ ಸ್ಫೂರ್ತಿಯಾಗಿದೆ. ದೇಹವನ್ನು ದಾನ ಮಾಡುವುದರಿಂದ ಮೂರು ವ್ಯಕ್ತಿಗಳಿಗೆ ಮರುಜನ್ಮ ನೀಡಿದಂತೆ ಆಗುತ್ತದೆ ಎಂದು ಆಸ್ಪತ್ರೆಯ ಅಧೀಕ್ಷಕ ಮನೀಶ್ ಮಂಡಲ್ ತಿಳಿಸಿದರು.

ಮೃತಪಟ್ಟ ಯುವಕನ ಕಣ್ಣುಗಳನ್ನು ಇನ್ ಸ್ಟಿಟ್ಯೂಟ್ ನಲ್ಲೇ ಇರಿಸಲಾಗಿದೆ. ಹೃದಯವನ್ನು ಕೋಲ್ಕತ್ತಾಗೆ ಕಳುಹಿಸಲಾಗಿದ್ದು, ಅಗತ್ಯವಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಲಿವರ್ ಅನ್ನು ದೆಹಲಿಗೆ ಕಳುಹಿಸಲಾಗಿದೆ ಎಂದು ಮಂಡಲ್ ಮಾಹಿತಿ ನೀಡಿದರು.

Comments are closed.