ರಾಷ್ಟ್ರೀಯ

ಆರ್‌ಜೆಡಿ ವರಿಷ್ಠ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಕುಟುಂಬದಲ್ಲಿ ದಾಯಾದಿ ಕಲಹ

Pinterest LinkedIn Tumblr


ಹೊಸದಿಲ್ಲಿ: ಆರ್‌ಜೆಡಿ ವರಿಷ್ಠ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಅವರು ಮೇವು ಹಗರಣದಲ್ಲಿ ಜೈಲುಪಾಲಾಗುತ್ತಿದ್ದಂತೆಯೇ, ಕುಟುಂಬದಲ್ಲಿ ಮಕ್ಕಳ ನಡುವೆ ರಾಜಕೀಯ ವಾರಸತ್ವಕ್ಕಾಗಿ ಕಲಹ ತೀವ್ರಗೊಂಡಿದೆ.

ಈ ಹಿನ್ನೆಲೆಯಲ್ಲಿ ಲಾಲು ಅವರು ತಾವು ಚಿಕತ್ಸೆ ಪಡೆಯುತ್ತಿರುವ ರಾಂಚಿಯ ಆಸ್ಪತ್ರೆಗೆ ಶುಕ್ರವಾರ ಮುವರೂ ಮಕ್ಕಳನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ್ದಾರೆ. ಪ್ರಸ್ತುತ ಕಿರಿಯ ಪುತ್ರ ಹಾಗೂ ಹಾಲಿ ಬಿಹಾರ ಪ್ರತಿಪಕ್ಷ ಮುಖಂಡ ತೇಜಸ್ವಿ ಯಾದವ್‌ಗೆ ಪಕ್ಷದ ಜವಾಬ್ದಾರಿಗಳನ್ನು ವಹಿಸಲಾಗಿದೆ. ಇದು ಸಹಜವಾಗಿಯೇ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಮತ್ತು ಸಂಸದೆ ಮಿಸಾ ಭಾರ್ತಿ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಲಾಲು ಅವರನ್ನೂ ಚಿಂತೆಗೀಡುಮಾಡಿದೆ. ಈ ಹಿನ್ನೆಯಲ್ಲಿ ಅವರು ಮೂವರೂ ಮಕ್ಕಳನ್ನು ಕರೆಸಿಕೊಂಡು ಚರ್ಚಿಸಿದ್ದಾರೆ.

Comments are closed.