ನವದೆಹಲಿ: ಗುರ್ಗಾಂವ್ ನ್ಯಾಯಾಧೀಶರ ಹೆಂಡತಿ ಮತ್ತು ಮಗನ ಮೇಲೆ ಸರ್ಕಾರಿ ಗನ್ಮ್ಯಾನ್ ಗುಂಡಿನ ದಾಳಿ ನಡೆಸಿ ಕೊಲ್ಲಲು ಯತ್ನಿಸಿರುವ ಘಟನೆ ನಡೆದಿದೆ.
ಗುರ್ಗಾಂವ್ನ ಸೆಕ್ಟರ್ 51ರ ಮಾರುಕಟ್ಟೆ ಪ್ರದೇಶದಲ್ಲಿ ಈ ದಾಳಿ ನಡೆಸಿದ್ದು, ಬಳಿಕ ಆತ ಬಂದೂಕು ಹಾಗೂ ಕಾರ್ನೊಂದಿಗೆ ಪರಾರಿಯಾಗಿದ್ದಾನೆ, ಈ ಘಟನೆಯಲ್ಲಿ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗಾಯಗೊಂಡಿರುವ ಮಹಿಳೆ ಮತ್ತು ಮಗನನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಉದ್ಧೇಶದಿಂದ ಈ ದಾಳಿ ನಡೆಸಲಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗುರುಗಾಂವ್ ಪೊಲೀಸ್ ಕಮೀಷನ್ ಪ್ರತಿಕ್ರಿಯೆ ನೀಡಿದ್ದು ಅಂಗರಕ್ಷಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ, ತನಿಖೆ ನಡೆಸಲಾಗುತ್ತಿದೆ ಎಂದಿದ್ಧಾರೆ.
Comments are closed.