ಅಲಹಬಾದ್: ಸಾಧು ಸಂತರು ಮತ್ತಿತರರ ಒತ್ತಾಯದ ಮೇರೆಗೆ ಎಲ್ಲರ ಒಪ್ಪಿಗೆ ಪಡೆದು ಶೀಘ್ರವೇ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕುಂಬ ಮಾರ್ಗದರ್ಶಕ್ ಮಂಡಳ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘೋಷಣೆ ಮಾಡಿದ್ದಾರೆ, ಸಾಧು ಸಂತರು ಮತ್ತು ಸಂಗಮ ಸಿಟಿಯ ಜನರ ಒತ್ತಾಯಕ್ಕೆ ರಾಜ್ಯಪಾಲ ರಾಮ್ ನಾಯಕ್ ಬೆಂಬಲ ನೀಡಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಅಲಹಬಾದ್ ಹೆಸರು ಬದಲಾವಣೆ ಪ್ರಸ್ತಾಪವನ್ನು ಶೀಘ್ರವೇ ಕೇಂದ್ರಕ್ಕೆ ಕಳುಹಿಸುವುದಾಗಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Comments are closed.