ರಾಷ್ಟ್ರೀಯ

ಸರಕಾರದಿಂದ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಚಿಂತನೆ

Pinterest LinkedIn Tumblr


ನಾಗ್ಪುರ: ಇನ್ನು ಮುಂದೆ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಮಹಾರಾಷ್ಟ್ರ ಸರಕಾರ ಮುಂದಾಗಿದೆ.

ಮಹಾರಾಷ್ಟ್ರದ ಅಬಕಾರಿ ಖಾತೆ ಸಚಿವ ಚಂದ್ರಶೇಖರ್ ಭವಾನಕುಲೆ ಅವರು ಶನಿವಾರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ‘ಇದು ರಾಜ್ಯದ ಮದ್ಯ ಉದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಇದು ದೇಶದಲ್ಲೇ ಮೊದಲ ಪ್ರಯತ್ನ’ ಎಂದು ಅವರು ತಿಳಿಸಿದ್ದಾರೆ.

ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವು ಜೀವಗಳು ನಷ್ಟವಾಗುತ್ತಿದೆ. ಇದನ್ನು ತಡೆಯುವ ಉದೇಶದಿಂದ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡುವ ಯೋಜನೆ ರೂಪಿಸಲು ಮುಂದಾಗಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಇ-ಕಾಮರ್ಸ್ ವೆಬ್‌ಸೈಟ್‌ ಮಾದರಿಯ ಪ್ಲಾಟ್‌ಫಾರಂ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಉದ್ದೇಶಿಸಲಾಗಿದೆ ಎಂದು ಅಬಕಾರಿ ಖಾತೆ ಸಚಿವ ಚಂದ್ರಶೇಖರ್ ಭವಾನಕುಲೆ ತಿಳಿಸಿದ್ದಾರೆ.

2015ರಲ್ಲಿ ದಾಖಲಾದ 4.64 ಲಕ್ಷ ರಸ್ತೆ ಅಪಘಾತ ಪ್ರಕರಣಗಳ ಪೈಕಿ ಶೇ.1.5ರಷ್ಟು ಅಪಘಾತಗಳು ಡ್ರಿಂಕ್‌ ಆ್ಯಂಡ್ ಡ್ರೈವ್ ಪ್ರಕರಣಗಳಾಗಿದೆ. ಇದರಿಂದ 2988 ಜನ ಸಾವನ್ನಪ್ಪಿದ್ದರೆ, 6,295 ಜನ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ಸಿಆರ್‌ಬಿ)ದ ವರದಿಗಳು ತಿಳಿಸುತ್ತಿವೆ.

Comments are closed.