ರಾಷ್ಟ್ರೀಯ

ಶಾಲೆಯಲ್ಲಿ ಗೋಮಾಂಸದ ಅಡುಗೆ: ಶಿಕ್ಷಕನ ಬಂಧನ

Pinterest LinkedIn Tumblr


ಗುವಾಹಟಿ: ಶಾಲೆಯ ಅಡುಗೆಕೋಣೆಯಲ್ಲಿ ಗೋಮಾಂಸ ಬೇಯಿಸಿದ ಆರೋಪದ ಮೇಲೆ ಅಸ್ಸಾಂಮಿನ ಡರ್ರಾಂಗ್ ಜಿಲ್ಲೆಯಲ್ಲಿ ಮಂಗಳವಾರ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ.

ಆರೋಪಿಯನ್ನು ನಾಸಿರುದ್ದೀನ್ ಅಹಮದ್ ಎಂದು ಗುರುತಿಸಲಾಗಿದ್ದು, ಈತ ಜಿಲ್ಲೆಯ ಅಲ್ಪಸಂಖ್ಯಾತ ಪ್ರಾಬಲ್ಯದ ಪ್ರದೇಶದ ದಲ್ಗಾಂವ್‌ನಲ್ಲಿರುವ ದಖಿನ್ ದುಲಿಯಾಪರ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕನಾಗಿದ್ದಾನೆ.

ಶಾಲೆಯಲ್ಲಿ ಓದುವ ಮಕ್ಕಳಿಗೆ ಮಧ್ಯಾಹ್ನದ ಊಟ ತಯಾರಿಸಲು ಮೀಸಲಾಗಿಟ್ಟಿರುವ ಕೊಠಡಿಯಲ್ಲಿ ಗೋಮಾಂಸ ಬೇಯಿಸಲಾಗಿತ್ತು.

ಜಿಲ್ಲೆಯ ಪ್ರಾಥಮಿಕ ಶಿಕ್ಷಣ ಅಧಿಕಾರಿ (ಡಿಇಒಒ) ಸಲ್ಲಿಸಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮೂಲಕ ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತನೆ ಮಾಡಲು ಯತ್ನಿಸಿರುವ ಆರೋಪವನ್ನು ಆತ ಎದುರಿಸುತ್ತಿದ್ದಾರೆ.

Comments are closed.